ನೆಲದನಿ
ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು
ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ: ಸಂಪುಟ 6
‘ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ’ ಯ ಒಂದು ಸಂಪುಟವನ್ನು ನಾನು ಮತ್ತು ಡಾ.ಕುಂಸಿ ಉಮೇಶ್ ಅವರು ಸಂಪಾದಿಸಿ ಈ ಹಿಂದೆ ಸಾಹಿತ್ಯ ಅಕಾಡೆಮಿಗೆ ಸಲ್ಲಿಸಿದ್ದೆವು. ‘ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು’ ಎಂಬ ಹೆಸರಲ್ಲಿ ಈ ಸಂಪುಟ ಮುದ್ರಣವಾಗಿ ಈಗ ಹೊರಬಂದಿದೆ.
ಪ್ರಸ್ತುತ ಸಂಪುಟವು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳನ್ನು ಅಧ್ಯಯನ ಮಾಡುವ ಆಸಕ್ತರಿಗೆ ಉಪಯುಕ್ತವಾಗಬಲ್ಲದು. ಮುಖ್ಯವಾಗಿ, ಎಂಫಿಲ್, ಪಿಎಚ್, ಡಿ ವಿದ್ಯಾರ್ಥಿಗಳು, ಆಸಕ್ತ ಸಂಶೋಧಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಇದು ಕೈಪಿಡಿಯ ರೂಪದಲ್ಲಿ ನೆರವಾಗುತ್ತದೆ. ತಳಸ್ತರದ ಸಮುದಾಯಗಳನ್ನು ಅಧ್ಯಯನ ಮಾಡುವ ದೃಷ್ಟಿಕೋನವನ್ನು ವಿಶ್ಲೇಷಿಸುವ ಬರಹಗಳು ಇಲ್ಲಿವೆ.
ರಹಮತ್ ತರೀಕೆರೆ, ಹಿ ಚಿ ಬೋರಲಿಂಗಯ್ಯ, ಚಂದ್ರ ಪೂಜಾರಿ, ಟಿ ಆರ್ ಚಂದ್ರಶೇಖರ್, ದಿ. ಕಿಕ್ಕೇರಿ ನಾರಾಯಣ, ಟಿ ಎಸ್ ಚನ್ನೇಶ್ ಹೊನ್ನಾಳಿ, ಮಂಜುನಾಥ ಬೇವಿನಕಟ್ಟಿ, ಕ್ಷೀರಸಾಗರ, ಶೈಲಜ ಹಿರೇಮಠ, ಇವರ ಲೇಖನಗಳು ಈ ಸಂಪುಟದಲ್ಲಿವೆ. ಜೊತೆಗೆ ವರ್ತಮಾನವನ್ನು ಕಾಲದ ಅಗತ್ಯದಲ್ಲಿಟ್ಟು ವಿಶ್ಲೇಷಿಸುವ ಗೆಳೆಯರಾದ ಎಚ್ ಡಿ ಪ್ರಶಾಂತ, ಕಿರಣ್ ಗಾಜನೂರು, ಮೋಹನ್ ಚಂದ್ರಗುತ್ತಿ, ಹರ್ಷಕುಮಾರ್ ಕುಗ್ವೆ, ಅರುಣ್ ಜೋಳದ ಕೂಡ್ಲಿಗಿ, ಎಸ್ ಎಂ ಮುತ್ತಯ್ಯ, ಆರಡಿ ಮಲ್ಲಯ್ಯ, ಶಶಿಕಿರಣ್, ವೆಂಕಟಗಿರಿ ದಳವಾಯಿಯವರ ಬರಹಗಳು ಇಲ್ಲಿವೆ. ಇವುಗಳ ಜೊತೆ ಆನಂದ್ ತೇಲ್ತುಂಬ್ಡೆ, ವರ್ಜಿನಸ್ ಕಾಕಾ, ಸೀತಾಕಾಂತ್ ಮಹಾಪಾತ್ರ, ಹರಿಮೋಹನ್ ಮಾಥೂರ್, ಪೆಗ್ಗಿ ಫ್ರಾಯರ್, ಮಿಲಿಂದ್ ಬೋಕಿಲ್, ಮುಂತಾದ ಹಿರಿಯರ ಲೇಖನಗಳೂ ಇವೆ. ಒಟ್ಟಿನಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವೈಧಾನಿಕ ಪ್ರಸ್ಥಾನಗಳನ್ನು ವಿಶ್ಲೇಷಿಸುವ ಅತ್ಯುತ್ತಮ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಇಂತಹ ಒಂದು ಯೋಜನೆಯನ್ನು ನಮಗೆ ವಹಿಸಿದ ಮೇಟಿ ಮಲ್ಲಿಕಾರ್ಜುನ ಅವರಿಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು. ಅಕಾಡೆಮಿಯ ಅಂದಿನ ಮತ್ತು ಇಂದಿನ ಅಧ್ಯಕ್ಷರಾದ ಮಾಲತಿ ಪಟ್ಟಣಶೆಟ್ಟಿ, ಅರವಿಂದ ಮಾಲಗತ್ತಿ ಮತ್ತು ಸಿಬ್ಬಂದಿ ವರ್ಗಕ್ಕೆ ನಮಸ್ಕಾರಗಳು. ಬರಹಗಳನ್ನು ಮಾಡಿಕೊಟ್ಟ ಹಿರಿಯ ಮತ್ತು ಕಿರಿಯ ಮಿತ್ರರಿಗೆ, ಅನುವಾದ ಮಾಡಿಕೊಟ್ಟ ಗೆಳೆಯರಿಗೆ ಧನ್ಯವಾದಗಳು.
ಒಟ್ಟು 872 ಪುಟಗಳ ಪುಸ್ತಕವಿದು. ಬೆಲೆ: 380/- ರೂಪಾಯಿಗಳು. ಸಾಹಿತ್ಯ ಅಕಾಡೆಮಿಯ ಮಾರಾಟ ಮಳಿಗೆಗಳಲ್ಲಿ ಈ ಪುಸ್ತಕವನ್ನು ಖರೀದಿಸಬಹುದು.
– ಡಾ.ಎ.ಎಸ್.ಪ್ರಭಾಕರ್
ಸುದ್ದಿದಿನ.ಕಾಂ|ವಾಟ್ಸಾಪ್|9986715401