ದಿನದ ಸುದ್ದಿ
ಸಾಧನೆಯ ಶಿಖರ ತರಳಬಾಳು ವಿಶ್ವಗುರುವಿನ ಸಾರ್ಥಕ ಸಮಾಜಭ್ಯುದಯಕ್ಕೆ ನಾಲ್ಕು ದಶಕಗಳ ಸಂಭ್ರಮ
ಪರಮಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಧೀಶ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪಟ್ಟಾಭಿಷಿಕ್ತರಾಗಿ ( 11-02-1979 ಭಾನುವಾರ ) ನಿನ್ನೆಗೆ ನಲವತ್ತು ವರ್ಷಗಳ ಸಂದ ಸುದಿನ.
ಬಸವಾದಿ ಮರುಳಸಿದ್ದರ ಬಳಿವಿಡಿದು , ಶ್ರೀ ಗುರು ಪಿತಾಮಹಾ ಶ್ರೀ ಗುರುಶಾಂತದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶಯದ ಕಾರಣಿಕ ತೇಜಸ್ವಿಗುರುವಾಗಿ ,ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಕರಕಮಲ ಸಂಜಾತರಾಗಿ ಸಮಾಜದ ಅಭ್ಯುಧಯಕ್ಕೆ ಅಹರ್ನಿಶಿ ಕೈಕಂಕರ್ಯ ಬದ್ದರಾಗಿ ,ಕಾಯಕವೇ ಕೈಲಾಸ ಅದುವೇ ಕರ್ತವ್ಯದ ಮಹಾಉದ್ದೇಶವೆಂದು ಸಮಾಜಮುಖಿ,ರೈತಮುಖಿ,ಶರಣಮುಖಿ,ಧಾರ್ಮಮುಖಿ,ನ್ಯಾಯಮುಖಿ,ಶಿಕ್ಷಣಮುಖಿಯಾಗಿ ಸಾಧನೆಗಳ ಪರ್ವತವಾಗಿ ,ಸರಸ್ವತಿ ವರಪುತ್ರ ವಿದ್ವತ್ ಪ್ರವೀಣರಂತೆ ಅಪರೂಪದ ಗುರುರಾಜತೇಜಪುಂಜದಿ ವಿರಾಜಮಾನರಾಗಿ ನೊಂದ ಮನಗಳಿಗೆ ಬೆಂದ ಹೃದಯಗಳಿಗೆ ಬೆಳದಿಂಗಳ ನೀರ ತಾವರೆಯಂತೆ ಸುಧಾರಣೆಯ ಕಂಪನ್ನು ಪಸರಿಸುತ್ತಿರುವ ಅಸಂಖ್ಯಾತ ಶಿಷ್ಯರ ವಿಶ್ವಗುರುವಿಗೆ ಭಕ್ತಿ ಪೂರ್ವಕ ಅನಂತ ಪ್ರಣಾಮಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401