ದಿನದ ಸುದ್ದಿ
ಶಿಕ್ಷಕರ ದಿನಾಚರಣೆ
- ದಿವ್ಯಶ್ರೀ.ವಿ
ಬೆಂಗಳೂರು
ಗುರು ಬ್ರಹ್ಮ
ಗುರು ವಿಷ್ಣು
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರ ಭ್ರಹ್ಮ
ತಸ್ಮೈಶ್ರೀ ಗುರುವೇ ನಮಹ…
ಭಾರತದಲ್ಲಿ ನಾವು ದೇವರು,ತಂದೆ ತಾಯಿಗೆ ಹೇಗೆ ಗೌರವ ಪ್ರೀತಿ ಕೊಡುತ್ತೀವೋ ಅದೇ ರೀತಿ ವಿದ್ಯೆ ಕಲಿಸುವ ಗುರುವಿಗೂ ಅಷ್ಟೇ ಪ್ರೀತಿ ಗೌರವವನ್ನು ಕೊಡುತ್ತೇವೆ.
ನಮ್ಮ ಜೀವನದಲ್ಲಿ ಬದುಕು ರೂಪಿಸಿಕೊಳ್ಳಲು ಪಾಠ ಹೇಳಿ ಕೊಡುವ ಗುರುಗಳನ್ನು ನಾವು ಪೂಜಿಸಿ ಆರಾಧಿಸುತ್ತೇವೆ. ನಮ್ಮ ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಸ್ಮರಣೆಗಾಗಿ ಆಚರಿಸುತ್ತೇವೆ.
ಈ ದಿನ ಅವರ ಸವಿ ನೆನಪಿಗಾಗಿ ಎಲ್ಲಾ ಗುರುಗಳಿಗೂ ಸನ್ಮಾನ, ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ.
ಶಿಕ್ಷಕರ ಪಾತ್ರವು ವಿದ್ಯಾರ್ಥಿಗಳ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ಸರ್ವಪಳ್ಳಿ ರಾಧಾಕೃಷ್ಣ ಅವರು ಜನಿಸಿದ್ದು ಸೆಪ್ಟೆಂಬರ್- 5, 1888 ರಲ್ಲಿ ತಮಿಳುನಾಡಿನ ತಿರುತ್ತಣಿ ಎಂಬ ಊರಲ್ಲಿ ಸರ್ವಪಲ್ಲಿ ವೀರಸ್ವಾಮಿ ಮತ್ತು ಸೀತಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು.
ಚಿಕ್ಕ ವಯಸ್ಸಿನಿಂದ ಓದುವ ಹವ್ಯಾಸ ಬೆಳೆಸಿಕೊಂಡಿದ್ದ
ರಾಧಾಕೃಷ್ಣ ಅವರು ಭಾರತದ ಹಿಂದೂ ಧರ್ಮದ ವೇದ ಉಪನಿಷತ್ಗಳನ್ನು, ತತ್ವಜ್ಞಾನಿಗಳ ಪುರಾಣಗಳನ್ನು, ಮುಂತಾದ ಸನಾತನ ಧರ್ಮದ ಸಾರ ವನ್ನು ಪಠಿಸಿ ತತ್ವಜ್ಞಾನ ವಿಭಾಗದ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಭೋದನೆ ಮಾಡುತ್ತಿದ್ದರು.
ಸ್ವತಃ ಶಿಕ್ಷಕನಾಗಿ ಮಕ್ಕಳಿಗೆ ಪಾಠ ಹೇಳುತ್ತಿದ್ದ ರಾಧಾಕೃಷ್ಣ ಅವರಿಗೆ ಭಾರತದ ಮೊಟ್ಟ ಮೊದಲ ಉಪರಾಷ್ಟ್ರಪತಿ ಸ್ಥಾನ ಕೂಡ ಪಡೆದುಕೊಂಡು ಶೈಕ್ಷಣಿಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರು.ಅದಕ್ಕಾಗಿಯೇ ಅವರ ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ವಿಭೃಂಜಣೆಯಿಂದ ಆಚರಿಸುತ್ತಿದ್ದರು.
ಅದನ್ನು ಬೇಡವೆಂದು ರಾಧಾಕೃಷ್ಣ ಅವರು ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ನನಗೆ ಹೆಚ್ಚು ಖುಷಿಯಾಗುವುದು ಎಂದು ಹೇಳುತ್ತಾರೆ. 1962 ರಿಂದ ಅವರ ವಿದ್ಯಾರ್ಥಿಗಳು ಈ ಶಿಕ್ಷಕರ ದಿನಾಚರಣೆಯನ್ನು ಪ್ರಾರಂಭಿಸಿದರು. ದೇಶದ ಎಲ್ಲಾ ಶಾಲಾ – ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿದ್ದಾರೆ.
ಆ ದಿನದಂದು ಶಿಕ್ಷಕರು ಮಕ್ಕಳಾಗಿ, ಮಕ್ಕಳು ಶಿಕ್ಷಕರಾಗಿ ತಮ್ಮ ಶಿಕ್ಷಕರಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾರೆ.ಕಳೆದ ವರ್ಷದಿಂದ ಕೊರೋನಾ ಹಾವಳಿಯಿಂದ ಶಾಲೆಗಳ ಬಾಗಿಲಿಗೆ ಬೀಗ ಹಾಕಿರುವುದರಿಂದ ಶಿಕ್ಷಕರ ದಿನಾಚರಣೆ ಸ್ಥಗಿತವಾಗಿದೆ. ಈ ವರ್ಷವೂ ಮಕ್ಕಳೆಲ್ಲರು ಆನ್ಲೈನ್ ಕ್ಲಾಸ್ಗಳ ಮುಕಾಂತರ ತಮ್ಮಶಿಕ್ಷಕರಿಗೆ ಶುಭ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243