ಲೋಕಾರೂಢಿ
ಗ್ರಾಮಗಳಿಗೆ ಬಂತು ‘ಸರ್ಕಾರಿ ಶಾಲೆಗಳ ದುರ್ಗತಿ’..!
ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳನ್ನು ಕೃಷಿಯಲ್ಲಿ ತೋಡಗಿಸಿಕೊಳುವುದೆ ಹೆಚ್ಚು. ಅಂತಹ ಸಂದರ್ಭದಲ್ಲಿ ಯಾವುದೆ ಸೌಲಭ್ಯವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕನಸಿನ ಮಾತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ ಮಾಧ್ಯಮ ಪರಿಚಯಿಸಲು ಉತ್ಸುಕರಾಗಿದ್ದಾರೆ. ಆದರೆ, ಸಾವಿರಾರು ಮಕ್ಕಳು ಕನ್ನಡ ಮಾಧ್ಯಮ ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಅಲೆದಾಡುತ್ತಿದ್ದಾರೆ.
ಅಲ್ಲದೆ 5,272 ಗ್ರಾಮಗಳಲ್ಲಿ ಶಾಲೆಗಳೆ ಇಲ್ಲ. ಇಂತಹ ಸಂದರ್ಭದಲ್ಲಿ ಇಂಗ್ಲೀಷ ಮಾಧ್ಯಮ ಪರಿಚಯಿಸುವ ಅವಶ್ಯಕತೆ ಇದೆಯೇ? ಇಷ್ಟು ವರ್ಷಗಳಾದರು ಸರ್ಕಾರ ಯಾಕೆ ಈ ಹಳ್ಳಿಗಳಿಗೆ ಶಾಲೆಗಳ ಸೌಲಭ್ಯ ನೀಡಿಲ್ಲ. ಇಷ್ಟುದಿನ ಸರ್ಕಾರ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇನ್ನಾದರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂಗ್ಲೀಷ ಮಾಧ್ಯಮ ಪರಿಚಯಿಸುವ ಬದಲು ಮೊದಲು ಈ ಪ್ರದೇಶಗಳಿಗೆ ಕನ್ನಡ ಶಾಲೆಗಳನ್ನು ನಿರ್ಮಾಣ ಮಾಡುವ ಕಾರ್ಯವನ್ನು ಕೈಗೊಳ್ಳಬೇಕು.
–ಸಂಗೀತಾ.ಗ.ಗೊಂಧಳೆ
ಪತ್ರೀಕೊದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ