ನೆಲದನಿ
ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಅಚ್ಚಕನ್ಯೆ ಜಲಪಾತ
ತೀರ್ಥಹಳ್ಳಿ ಎಂದೊಡನೆ ನೆನಪಾಗುವುದು ಹಚ್ಚ ಹಸಿರ ಪ್ರಕೃತಿ. ಕಾಡಿನ ನಡುನಡುವೆ ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಅಡಕೆ ತೋಟಗಳು. ಮಾರಿಗೊಂದೊಂದು ಮನೆಗಳು. ಈ ಎಲ್ಲಾ ಸೌಂದರ್ಯಕ್ಕೆ ತನ್ನದೊಂದು ಕೊಡುಗೆಯಿರಲಿ ಎಂದು ನದಿ ಸೃಷ್ಟಿಸಿರುವ ಜಲಪಾತಗಳು. ಈ ಜಲಪಾತಗಳನ್ನು ನೋಡುವುದು, ಅವುಗಳಲ್ಲಿ ಆಟವಾಡುವುದು ಎಂದರೇ ಒಂದು ಆನಂದ. ಇಂತಹ ಜಲಪಾತಗಳಲ್ಲಿ ಒಂದು ತೀರ್ಥಹಳ್ಳಿ ತಾಲ್ಲೂಕಿನ ಅಚ್ಚಕನ್ಯೆ ಜಲಪಾತ.
ಪ್ರಥಮ ಬಾರಿಗೆ ಏಳು ಅಡಿ ಎತ್ತರದಿಂದ ಜಲಪಾತವಾಗಿ ಶರಾವತಿ ನದಿ ಧುಮುಕುತ್ತದೆ. ಇದೇ ಅಚ್ಚಕನ್ಯೆ ಜಲಪಾತ. ಶರಾವತಿ ಉದಯಿಸುವ ಅಂಬುತೀರ್ಥ ಅಚ್ಚಕನ್ನೆ ಜಲಪಾತದಿಂದ 05 ಕಿ.ಮೀ ದೂರದಲ್ಲಿದೆ.
ನೋಡಲು ನಯನ ಮನೋಹರವಾಗಿರುವ ಈ ಜಲಪಾತ, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 82 ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 21 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿಯಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ. ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗಿನ ಅವಧಿ ಜಲಪಾತವನ್ನು ನೋಡಲು ಸೂಕ್ತ ಸಮಯ.
ಹೆಚ್ಚಿನ ಮಾಹಿತಿಗಾಗಿ
ಪರಾಮರ್ಶನ
https://kanaja.karnataka.gov.in
ಕೃಪೆ | dipr shimoga
ಸುದ್ದಿದಿನ.ಕಾಂ|ವಾಟ್ಸಾಪ್|9980346243