ಬಹಿರಂಗ
ಕಾರ್ಮಿಕರಿಗೆ ‘ಪಿಎಫ್’ ಜಾರಿಗೊಳಿಸಿದ ಅಂಬೇಡ್ಕರ್
ಕಾರ್ಮಿಕರಿಗೆ ಪಿಎಫ್ ಅಥವ ಭವಿಷ್ಯ ನಿಧಿ ಯೋಜನೆಯನ್ನು ಮೂಲತಃ ಜಾರಿಗೆ ತಂದಿದ್ದು ಬ್ರಿಟಿಷ್ ಸರ್ಕಾರ. ಅದರಲ್ಲೂ ಬ್ರಿಟಿಷ್ ಮಂತ್ರಿ ಮಂಡಲದಲ್ಲಿ 1942ರಿಂದ 1946ರವರೆಗೆ ಕಾರ್ಮಿಕ ಮಂತ್ರಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಎಂಬುದಿಲ್ಲಿ ಗಮನಿಸಬೇಕಾದ ವಿಷಯ. ಅಂಬೇಡ್ಕರರು ಪ್ರಥಮವಾಗಿ ಈ ಯೋಜನೆಯನ್ನು ಜಾರಿಗೊಳಿಸಿದ್ದು ಗಣಿ ಕಾರ್ಮಿಕರಿಗೆ.
ನಂತರ ಅದನ್ನು ರೈಲ್ವೇ ನೌಕರರು ಹೀಗೆ ಇತರರಿಗೆ ಹಂತಹಂತವಾಗಿ ವಿಸ್ತರಿಸಲಾಯಿತು. ನೌಕರರಿಗೆ ತುಟ್ಟಿಭತ್ಯೆ(ಡಿಎ) ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದು ಕೂಡ ಅಂಬೇಡ್ಕರರೆ. ದುರಂತವೆಂದರೆ ನಮ್ಮ ನೌಕರರು ಡಿಎ ಯಾರು ಹೆಚ್ಚು ಮಾಡುತ್ತಾರೋ ಆ ಸರ್ಕಾರ ಹೊಗಳುತ್ತಾರೆ. ಆದರೆ ಅದರ ಮೂಲಕತೃವನ್ನು ನೆನೆಯುವುದಿಲ್ಲ.
ಇಂದು ಕಾರ್ಮಿಕರ ದಿನಾಚರಣೆ. ಅದರ ಅಂತರ್ ರಾಷ್ಟ್ರೀಯ ಮಹತ್ವ ಏನಾದರೂ ಇರಲಿ. ಆದರೆ ಭಾರತದ ಕಾರ್ಮಿಕರು
ಜಾತ್ಯತೀತವಾಗಿ, ತಮ್ಮ ಜೀವತಾವಧಿಯಲ್ಲಿ ತಮ್ಮ ಅವಿರತ ಹೋರಾಟದ ನಡುವೆ ಬ್ರಿಟಿಷ್ ಕ್ಯಾಬಿನೆಟ್ ಲ್ಲಿ ಆ ಇಲಾಖೆಯ ಮಂತ್ರಿಯಾಗಿ ಸೇವೆ ಸಲ್ಲಿಸಿ, ಆಳದ ಗಣಿಗಳಿಗೆ ಖುದ್ದು ಭೇಟಿಕೊಟ್ಟು ಅಲ್ಲಿನ ಕಾರ್ಮಿಕರ ಒಟ್ಟಾರೆ ಸಮಗ್ರ ಕಾರ್ಮಿಕರ ಭವಿಷ್ದದ ದೃಷ್ಟಿಯಿಂದ ಭವಿಷ್ಯ ನಿಧಿ ಅಥವಾ ಪಿಎಫ್ ಜಾರಿಗೊಳಿಸಿದ ಬಾಬಾಸಾಹೇಬ್ ಅಂಬೇಡ್ಕರರನ್ನು ಸದಾ ನೆನೆಯಲಿ. ಆಗಷ್ಟೇ ಕಾರ್ಮಿಕ ರ ಯಾವುದೇ ಮಾದರಿಯ ಹೋರಾಟಕ್ಕೆ ಇನ್ನಷ್ಟು ಬಲ ಬರುತ್ತದೆ.
–ರಘೋತ್ತಮ ಹೊಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243