ದಿನದ ಸುದ್ದಿ

ಕಲಬುರಗಿಯ ರಟಕಲ್ ದೇವಸ್ಥಾನದಲ್ಲಿ ಆರತಿತಟ್ಟೆ ಹಣಕ್ಕಾಗಿ ಅರ್ಚಕರ ಕಿತ್ತಾಟ

Published

on

ಸುದ್ದಿದಿನ,ಕಲಬುರಗಿ: ಕರ್ನಾಟಕ ತೆಲಂಗಾಣ ಜನರ ಆರಾಧ್ಯ ದೈವ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನ ಅರ್ಚಕರ ಕಿತ್ತಾಟಯಿಂದ ಸುದ್ದಿಯಾಗಿದೆ. ಆರತಿ ತಟ್ಟೆಯಲ್ಲಿ ಬರುವ ದಕ್ಷಿಣೆ ಹಣಕ್ಕಾಗಿ ಮೂಲ ಅರ್ಚಕರು ಹಾಗೂ ಮುಜರಾಯಿ ಅರ್ಚಕರ ಕಿತ್ತಾಡಿಕೊಂಡಿದ್ದಾರೆ.

ಕಾಳಗಿ ತಾಲೂಕಿನ ರಟಕಲ್ ಶ್ರೀ ರೇವಣ್ಣಸಿದ್ದೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯ “ಎ” ಗ್ರೇಡ್ ದೇವಸ್ಥಾನಗಳಲ್ಲಿ ಒಂದಾಗಿದೆ. ರಾಜ್ಯ ಹೊರರಾಜ್ಯಗಳಲ್ಲಿ ಅಪಾರ ಭಕ್ತರನ್ನು ಹೊಂದಿದೆ. ದೇಗುಲಕ್ಕೆ ಬರುವ ಭಕ್ತರು ತಟ್ಟೆಗೆ ದಕ್ಷಿಣೆ ಹಾಕುವ ಪದ್ದತಿ ಇದೆ. ಆದ್ರೆ ದಕ್ಷಿಣೆ ಹಣಕ್ಕಾಗಿ ಅರ್ಚಕರು ಕಿತ್ತಾಡಿಕೊಳ್ಳುತ್ತಿದ್ದಾರೆ.

ಮೂಲ ಸಂಸ್ಥಾನಿಕ ಅರ್ಚಕರು ನಾವೇ ಎನ್ನುತ್ತಿರುವ ಚನ್ನಬಸಪ್ಪ, ಮಲ್ಲಿಕಾರ್ಜುನ, ಸೋಮನಾಥ, ರೇವಣಸಿದ್ದಪ್ಪ ಹಾಗು ಗಿರೀಶ್ ಎಂಬುವವರು ದೇವಸ್ಥಾನ ನಮ್ಮಗೆ ಸೇರಿದ್ದು, ನಾವು ಐದು ಜನ ಅರ್ಚಕರು ಮಾತ್ರ ದೇವಸ್ಥಾನದ‌ ಪೂಜೆ ಸೇರಿ ಸಕಲ ಕಾರ್ಯ ನೋಡಿಕೊಂಡು ಹೋಗುತ್ತಿದ್ದೇವೆ. ಆದರೆ ಇತ್ತೀಚೆಗೆ ಮುಜರಾಯಿ ಇಲಾಖೆ ನೇಮಿಸಿದ ಕೆಲ ಅರ್ಚಕರು ನಮ್ಮ ಕೈಯಲ್ಲಿ ಕಲಿತು ಈಗ ನಮ್ಮಗೆ ತಿರುಗಿ ಬಿದ್ದಿದ್ದಾರೆ ಅಂತಾ ಸಂಸ್ಥಾನಿಕರು ಎಂದು ಹೇಳಿಕೊಳ್ಳುವ ಅರ್ಚಕರು ಹೇಳ್ತಿದ್ದಾರೆ.

ಆದ್ರೆ ಮುಜರಾಯಿ ಇಲಾಖೆ ಅರ್ಚಕರು ಹೇಳೋ ಪ್ರಕಾರ ಇವರು ಸಂಸ್ಥಾನಿಕ ಅರ್ಚಕರು ಅಂತ ನಕಲಿ ದಾಖಲಾತಿ ನೀಡಿದ್ದಾರೆ‌. ಸೇಡಂ ಸಹಾಯಕ ಆಯುಕ್ತರು ತನಿಖೆ ನಡೆಸಿದ್ದಾಗ ನಕಲಿ ದಾಖಲಾತಿ ನೀಡಿರುವದು ಸ್ಪಷ್ಟವಾಗಿದೆ. ಅಲ್ಲದೇ ಈ ಹಿಂದೆ ದೇವಸ್ಥಾನದಿಂದ ತೆಗೆದುಕೊಂಡು ಹೋದ ವಸ್ತುಗಳು ಮರಳಿ ಕೊಡಬೇಕು ಇಲ್ಲದಿದ್ರೆ ದೂರು ದಾಖಲು ಮಾಡುವದಾಗಿ ಚನ್ನಬಸಪ್ಪಗೇ ಎಚ್ಚರಿಕೆ ಕೂಡಾ ನೀಡಲಾಗಿದೆ ಎಂದು ಮುಜರಾಯಿ ಅರ್ಚಕ ಓಂಪ್ರಕಾಶ್ ಹೇಳ್ತಿದ್ದಾರೆ.

ಅರ್ಚಕರ ಕಿತ್ತಾಟದಿಂದ ದೇವಸ್ಥಾನದ ಮಾನ ಹರಾಜು ಆಗ್ತಿದ್ದು, ಭಕ್ತರಲ್ಲಿ ನೋವುಂಟು ಮೂಡಿಸುತ್ತಿದೆ ಹೀಗಾಗಿ ಜಿಲ್ಲಾಡಳಿತ ಶೀಘ್ರವೇ ಕಿತ್ತಾಟಕ್ಕೆ ಬ್ರೇಕ್ ಹಾಕಲು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version