ದಿನದ ಸುದ್ದಿ
ಸಹಪಾಟಿಯನ್ನೇ ‘ಗ್ಯಾಂಗ್ ರೇಪ್’ ಮಾಡಿದ ಪುತ್ತೂರು ಕಾಲೇಜಿನ ವಿದ್ಯಾರ್ಥಿಗಳು ಅರೆಸ್ಟ್
ಸುದ್ದಿದಿನ,ಮಂಗಳೂರು : ಸಹಪಾಠಿ ವಿದ್ಯಾರ್ಥಿನಿಯನ್ನೇ ಗ್ಯಾಂಗ್ ರೇಪ್ ಮಾಡಿದ ಆರೋಪದಡಿ ಪುತ್ತೂರು ವಿವೇಕಾನಂದ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗುರುನಂದನ್ ಬಿನ್ ರಾಧಾ ಕೃಷ್ಣ 19 ವರ್ಷ,ಗಾಣದಮೂಲೆ ಮನೆ,ಬಜತ್ತೂರು ಗ್ರಾಮ ಪುತ್ತೂರು ತಾಲೂಕು, ಪ್ರಜ್ವಲ್ ಬಿನ್ ನಾಗೇಶ್ ನಾಯ್ಕ 19 ವರ್ಷ ರಾಜಶ್ರೀ ಕೃಪ,ಪೆರ್ನೆ ಗ್ರಾಮ ಬಂಟ್ವಾಳ, ಕಿಶನ್ ಬಿನ್ ಸದಾಶಿವ 19 ವರ್ಷ ಕಡಂಬು ಮನೆ ಪೆರ್ನೆ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು, ಸುನಿಲ್ ಬಿನ್ ಕಾಂತಪ್ಪ ಗೌಡ 19 ವರ್ಷ ಪಿಲಿಗುಂಡ ಮನೆ ಆರ್ಯಾಪು ಗ್ರಾಮ ಪುತ್ತೂರು ತಾಲ್ಲೂಕು, ಪ್ರಖ್ಯಾತ್ ಬಿನ್ ಸುಬ್ಬಣ್ಣ ಶೆಟ್ಟಿ 19 ವರ್ಷ ಬಲ್ಯ ಮನೆ ಬರಿಮಾರು ಗ್ರಾಮ ಬಂಟ್ವಾಳ ತಾಲ್ಲೂಕು ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಂದು ಘನಘೋರ ಅಪರಾಧದ ಮೂಲಕ ಸುದ್ದಿಯಲ್ಲಿದೆ. ಜಿಲ್ಲೆಯ ಮುತ್ತಿನ ನಗರಿ ಅಂತ ಕರೆಸಿಕೊಳ್ಳೊ ಪುತ್ತೂರು ತಾಲೂಕಿನಲ್ಲಿ ಕಾಲೇಜು ವಿದ್ಯಾರ್ಥಿಗಳೇ ಪಾತಕೀಕೃತ್ಯ ನಡೆಸಿದ್ದಾರೆ. ಪುತ್ತೂರಿನ ನೆಹರೂ ನಗರದಲ್ಲಿರುವ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿಯನ್ನೇ ಕಾಡಿನಲ್ಲಿ ಅತ್ಯಾಚಾರ ಮಾಡಿದ್ದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮಾಡಿದ್ದಾರೆ.
ಈ ಪ್ರಕರಣ ಪೆಬ್ರವರಿ ತಿಂಗಳಿನಲ್ಲಿ ನಡೆದಿದ್ದು, ಕಾಲೇಜು ಮುಗಿಸಿ ವಿದ್ಯಾರ್ಥಿಗಳು ಪ್ಲಾನ್ ಮಾಡಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿ ಪುತ್ತೂರು ಬಸ್ ಸ್ಟ್ಯಾಂಡ್ ಬಳಿ ನಿಂತಿದ್ದಾಗ ಕಾರ್ ನಲ್ಲಿ ಬಂದ ವಿದ್ಯಾರ್ಥಿಗಳು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಪುತ್ತೂರು ಸಮೀಪದ ಕಾಡಿನಲ್ಲಿ ನಾಲ್ವರೂ ಅತ್ಯಾಚಾರ
ಮಾಡಿದ್ದು, ತಂಡದಲ್ಲಿದ್ದ ಒರ್ವ ಘಟನೆಯನ್ನು ವಿಡಿಯೋ ಮಾಡಿದ್ದ. ಈ ನಡುವೆ ಕಾಲೇಜು ಚುನಾವಣಾ ಸಂಧರ್ಭದಲ್ಲಿ ಈ ವಿದ್ಯಾರ್ಥಿಗಳ ನಡುವೆ ಮನಸ್ತಾಪ ಮೂಡಿಬಂದಿದ್ದು, ದ್ವೇಷದಿಂದ ಓರ್ವ ವಿದ್ಯಾರ್ಥಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ ಎನ್ನಲಾಗಿದೆ.
ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆಯೇ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ ಸುಮೊಟೋ ಕೇಸ್ ದಾಖಲಿಸಿ ತನಿಖೆಗೆ ಸೂಚಿಸಿದ್ದರು. ಆದರೆ ಬಳಿಕ ವಿದ್ಯಾರ್ಥಿನಿ ದೂರು ನೀಡಿದ್ದಳು. ಇನ್ನು ಕಾಲೇಜಿನ ಐವರು ವಿದ್ಯಾರ್ಥಿಗಳನ್ನ ಡಿಬಾರ್ ಮಾಡಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಐವರು ವಿದ್ಯಾರ್ಥಿಗಳನ್ನ ಡಿಬಾರ್ ಮಾಡಿದೆ. ಈ ನಡುವೆ ಘಟನೆ ಸಂಬಂಧ ಅತ್ಯಾಚಾರ ಎಸಗಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡದಂತೆ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.. ವಿಡಿಯೋ ಫಾರ್ವರ್ಡ್ ಮಾಡಿದ್ರೆ,ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ರೆ ಅರೆಸ್ಟ್ ಮಾಡೋದಾಗಿ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ವರದಿ ಕೃಪೆ : ಝೂಮ್ ನ್ಯೂಸ್
ಸುದ್ದಿದಿನ.ಕಾಂ|ವಾಟ್ಸಾಪ್|9980346243