ಬಹಿರಂಗ
ಕುರುಡು ಕಾಂಚಾಣ ನೀನೊಮ್ಮೆ ಕಣ್ತೆರದು ನೋಡು..
ಅವತ್ತು ರಜೆ ಮೇಲೆ ಬೆಂಗಳೂರಿಗೆ ಹೋಗಿದ್ದೆ , IPL match ನಡಿತಿತ್ತು.. ಅವತ್ತಿನ್ match ಯಾರ್ ಗೆಲ್ತಾರೆ ಅಂತಾ ನಮ್ ಹುಡುಗರು ಕೇಳುದ್ರು , ನಾನು ನನ್ idea ಮೇಲೆ ಅಡ್ಡೇಟ್ ಮೇಲೆ ಗುಡ್ಡೇಟ್ ಹಾಕ್ದಂಗೆ ಒಂದ್ team ಹೆಸರು ಹೇಳ್ದೆ… ನನ್ ಅದೃಷ್ಟಾನೋ,
ಏನೋ ! ಅವತ್ತಿನ್ match ನಲ್ಲಿ ಅದೇ team ವಿನ್ ಆಯ್ತು… So ಅದೇ ಸಾಕಾಯ್ತು ನನ್ friends ಗೆ ಬೆಟ್ಟಿಂಗ್ ನಲ್ಲಿ ಬಂದಿದ್ದ ದುಡ್ನಲ್ಲಿ ಫುಲ್ ಪಾರ್ಟಿ ಮಾಡಕ್ಕೆ decide ಮಾಡುದ್ರು …. ಅದೇ time ನಲ್ಲಿ ನನ್ friend ಮಾವ ನಾನೇಳಿದ ಮಾತನ್ನೆ ನಂಬ್ಕೊಂಡು ಎಣ್ಣೆ ನಶೆನಲ್ಲಿ ಬೆಟ್ಟಿಂಗ್ ಹಾಕಿದ್ರಂತೆ… ಅವ್ರಗೂ ಲಾಟರಿ ಹೊಡ್ದಿತ್ತು… ಬಾ ಮಗಾ ನಿಂಗೆ ಬೆಂಗಳೂರು ಸ್ವರ್ಗ ತೋರುಸ್ತೀನಿ ಅಂತಾ ಕರ್ಕೊಂಡೋದ್ರು…
ರಾತ್ರಿ 9ಗಂಟೇಲಿ Car ಅತ್ಕೊಂಡೆ , ನೈಸ್ road ಜಂಕ್ಷನ್ ಇಂದ city ಆಚೆ ಹೋಗಿದ್ ಮಾತ್ರ ಗೊತ್ತು, ಮಿಕ್ಕಿದ್ address ನಂಗೆ ಗೊತ್ತಿಲ್ಲ…
Car ಇಂದ ಕೆಳಗೆ ಇಳಿತ್ತಿಂದಂಗೆ ದೊಡ್ಡ building ಕಾಣಿಸ್ತು .… May be ಅದು ಬೆಂಗಳೂರಿನ ದೊಡ್ಡ ಪಬ್ ಅನ್ನೊದ್ ನಂಗ್ ಗೊತ್ತಾಯ್ತು…
Buildings ಸುತ್ತ ಕಾಂಪೌಂಡ್ .. ಗೇಟ್ ಅಲ್ಲಿ ಇಬ್ರು ಅಜಾನುಬಾಹುಗಳ ತರ ಇರೋ watchman ಗಳು… ಒಂದ್ ಕಡೆ ಪಾರ್ಕಿಂಗು ಇನ್ನೊಂದ್ ಕಡೆ striking…
ದೊಡ್ಡದಾದ ಬಾಗಿಲು entry ಅಂತಾ sign board ಬೇರೆ ನೇತಾಡ್ತಾ ಇತ್ತು… ಅಲ್ಲಿಬ್ಬು ದಾಂಡಿಗ್ರು black t shirts .. ಅದ್ರಲ್ಲಿ t shirts ಯಾವುದು ಅವರ ಬಾಡಿ ಯಾವುದು ಒಂದು ಗೊತ್ತಾಗ್ತಿರ್ಲಿಲ್ಲ ಆ ರೇಂಜಲ್ಲಿದ್ರು…
ಒಳಗಡೆ entry ನಲ್ಲಿ ಸಣ್ಣಾ ಪುಟ್ಟ chekingsಊ…. ಅವ್ರು ಏನೋ ತೋರ್ಸಿದ್ರು ಜೊತೆಲಿ ನನ್ನು ಬಿಟ್ಟರೂ… ಒಳಗೋದೆ ಫುಲ್ ಬ್ಲೂ ಕಲರ್ lights.. ಜೊತೆಗೆ ಅರ್ಥ ಆಗ್ದಲೆ ಇರೋ ಯಾವುದೋ ಇಂಗ್ಲೀಷಿನಾ ಸಾಂಗು… ಏನು ಕೇಳ್ಸಕ್ಕಿಲ್ಲ ಆದ್ರಲ್ಲಿರೋ music’s ಮಾತ್ರ ಕಿವಿಗೆ ಬೀಳ್ತಿತ್ತು…
ಅಲ್ಲೊಂದ್ ಸೋಪಾ ಮೇಲೆ ಕೂತ್ಕೊಂಡೆ.. ಏನಾದ್ರು order ಮಾಡು ಅಂತಾ ಹೇಳಿದ್ರು… ನಾನು badam drink ಅಂದೇ… ನಕ್ಕಿದ್ರು..!!
ನಾನ್ ಕುಡ್ಯದು ಅದೇ ಸಾರ್ ಅಂದೆ…
ಪಕ್ಕದ್ table ನಲ್ಲಿ ಒಬ್ಳು ಕುಡಿತಿದ್ಲು… ಅವಳನ್ನ ನೋಡು ಅಂದ್ರು ..ನೀರಿನ್ ಥರ ಇತ್ತು transparent ಗ್ಲಾಸ್ ನಲ್ಲಿ ಕುಡಿತಿದ್ಲು… ನಾನು ಬಿಡಿ ಸಾರ್ sprite ಕುಡಿತಾವ್ಳೆ ಅವಳನ್ಯಾಕೆ ನಾನ್ ನೋಡ್ಲಿ.. ಅಂದೆ.. ! ಅದಕ್ಕೆ ಅವರು ಅಂದ್ರು ಮಗು ನೀನ್ ಕಲಿಯದು ಬೇಜಾನ್ ಇದೆ ಅದು white rum ಅಂದ್ರು…
ನನಗೆ ನಾನೆ ಒಂತರ ಜುಗುಪ್ಸೆ ಅನ್ನಿಸ್ತಿತ್ತು… ಪಬ್ಬು ಅಂದಮೇಲೆ ಇದೆಲ್ಲಾ ಮಾಮುಲಿ , ಇನ್ನು ಇದೆ ನೋಡದು ಅಂದ್ರು… ನಾನು ಅದೇನ್ ಗನಾಂಧಾರಿ ಕಾರ್ಯ ಅಂತಾ ..ರಾಮನಿಗಾಗಿ ಕಾದ ಶಬರಿಯಂತೆ ಕಾಯ್ತ ಇದ್ದೆ!!!!
ಅವಳು ತನ್ನ ಮೈ ಮಾಟದಿಂದ ಅಲ್ಲಿದ್ದವರ ಕತ್ತಲೆಯನ್ನು ಕದ್ದ ಪೋರಿ… ಬರೀ ಕತ್ತಲೆಯನ್ನೇ ಅಲ್ಲಾ..? . ಅವರ ಇಡೀ ಖಜಾನೆಯನ್ನೆ ಕದಿಯಲು ಬಂದಿರುವ ಮಾಯಾವಿ ನಾರಿ ಅಂತಾ ಆಗ್ಲೆ ಗೊತ್ತಾಗಿದ್ದು…!!!
Background ನಲ್ಲಿ English song play ಆಗ್ತಿತ್ತು ಅದಕ್ಕೆ ತಕ್ಕನಾಗಿ ಈಕೆ dance ಮಾಡ್ತಿದ್ಲು..ಇನ್ನು ಜಾಸ್ತಿಅಂದ್ರೆ ಅಲ್ಲಿಸ್ದ table ಅತ್ರನು ಬಂದು dance ಹಾಡೋಳು ಆಗ ಅಲ್ಲಿದ್ದವರು ಒಂದ್ ಕೈನಲ್ಲಿ scotch , ಇನ್ಮೊಂದ್ಕೈನಲ್ಲಿ ಅವಳ ಮೇಲೆ ನೋಟಿನ ಕಂತೆಯನ್ನೇ ತೆಗೆದು ಎಸಿತಿದ್ರು… 50,100, 500… ನೋಟುಗಳು ಅವಳ ಮೇಲೆ ಬಿಸಾಕ್ತಿದ್ರು.. ಅವಳತ್ರ ಹೋಗಿ ಅವಳ ಮೇಲೆ ಚೆಲ್ಲಾಡ್ತಿದ್ರು ,ಆಕೆಏನಾದ್ರು ಇವತ ಜೊತೆ dance ಮಾಡಕ್ಕೆ ಅಂತಾ ಬಂದ್ರೆ ಅದಕ್ಕೂಡ extra charges applicable, ಅವಳ ಮೇಲೆ ಆ ಉರಿಯೋ ದಿಡ್ಡಿನ ಮಳೆನ ಅವಳ assistant ಬಂದು ಆ ದುಡ್ಡನ್ನ collect ,ಮಾಡ್ಕೊತ್ತಿದ್ದ…. ಆವಾಗ ಅನ್ಸಿತ್ತು ಈ ಬಡ್ಡಿ ಮಕ್ಕಳಿಗೆ ದುಡ್ಡಿನ ಮೇಲೆ ಎಷ್ಟು ಸೊಕ್ಕಿದೆ ಅಂತಾ… ಅಲ್ಲಿನ ಕ್ಷಣಿಕ ಸುಖಕ್ಕೋಷ್ಕರ ದುಡ್ಡಿನಕಂತೆನೆ ಹಂಗೆ ಎಸೆಯೋರು ಯಾಕ್ ಹಿಂಗೆ ಯೋಚನೇನೆ ಮಾಡಲ್ಲಾ, ಅಂತಾ…. ??
ಇವತ್ತು ಎಷ್ಟೋ ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗತ್ತಿದ್ದಾರೆ, ನಮ್ಮ ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಇವತ್ತು ಶಿಕ್ಷಣ ಪಡಿಲಾರದೆ ಅನಕ್ಷರಸ್ಥರಾಗೆ ಉಳಿತಿದ್ದಾರೆ.. 59% ಹೆಣ್ಣು ಮಕ್ಕಳು ಅವಿದ್ಯಾವಂತರಾಗೆ ಉಳಿದಿದ್ದಾರೆ.
ಇವತ್ತಿನ ದಿನದಲ್ಲಿ ಒಂದೊಂದು ತುತ್ತು ಅನ್ನಕ್ಕೋಸ್ಕರ ಅಲೆಯುತ್ತಿದ್ದಾರೆ, 38% ಜನ ತುತ್ತು ಅನ್ನವಿಲ್ಲದೆ ಸಾಯ್ತ ಇದಾರೆ, ಅಂತೋರಿಗಾದ್ರು ದಾನ ಅಂತಾ ಮಾಡುದ್ರೆ ! , ಎಷ್ಟೋ ಕುಟುಂಬಗಳು ಜೀವನಮಾಡ್ತವೆ . …
ಅಲ್ಲಿರೋರ್ಗೆ ಯಾವಗಪ್ಪ ಹಿಂಗೆ ಅನ್ನಿಸೋದು ಅನ್ನಿಸ್ತಿತ್ತು…
ನಾನು ಕೂಡ ಒಂದು ಮದ್ಯದ ವರ್ಗದ ಕುಟುಂಬದಲ್ಲಿ ಹುಟ್ಟಿ ಬಂದೋನು . ನನ್ನ ತಂದೆ ತಾಯಿ ಆಗಿನ ಕಾಲದಲ್ಲಿ ನಮ್ಮನ ಕೂಲಿ ನಾಲಿ ಮಾಡಿ ಸಾಕಿದ್ರು.. ಬೆಳೆಸಿದ್ರು… ಒದಿಸಿದ್ದರು..ಆದ್ರೆ ಇವತ್ತು ಎಷ್ಟೋ ಜನಕ್ಕೆ ತಂದೆ ತಾಯಿ ಪ್ರೀತಿ ನೇ ಸಿಕ್ಕಿಲ್ಲಾ…ಅಂತಾ ಮಕ್ಕಳಿಗಾದ್ರು ಅವರು ಯಾರದೋ ಮೇಲೆ ದುಡ್ಡನ್ನು ಚೆಲ್ಲುವ ಬದಲು ಅಂತವರ ಶಿಕ್ಷಣಕ್ಕೆ ವ್ಯಯಿಸಿದರೆ… ಈ ದೇಶದ ಚಿತ್ರಣವೇ ಬದಲಾಗುವಂತೆ ಸಾಗುತ್ತೆ…
ನಾನು ಇಂಜಿನಿಯರಿಂಗ್ ಮಾಡ್ವಾಗ್ಲು ಕೂಡ ಬಸ್ ಪಾಸ್ ತಗೋಳಕ್ಕೆ , ಮತ್ತೆ exam fee ಕಟ್ಟಕ್ಕು ನನ್ ಅತ್ರಾ ದುಡ್ ಇರ್ಲಿಲ್ಲ , ಅವಾಗ ಯಾರೋ ಒಬ್ಬ ಪುಣ್ಯಾತ್ಮನನ್ನು ಕೇಳಿದೆ… ಯಾಕಂದ್ರೆ ಅವಾಗ ನಾನು ಕರ್ನಾಟಕದ ಒಂದು ಪ್ರತಿಷ್ಟಿತ ಕನ್ನಡ ಪರ ಸಂಘಟನೆಯ ವಿದ್ಯಾರ್ಥಿ ಸಂಘದ ಅದ್ಯಕ್ಷ ನಾಗಿದ್ದೆ,..ನಾನು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಕೊಳ್ದೆ ಪ್ರಾಮಾಣಿಕ ವಾಗಿ ವಿದ್ಯಾರ್ಥಿಗಳ ಪರವಾಗಿ , ಕನ್ನಡದ ಪರವಾಗಿ ಹೋರಾಟಮಾಡ್ತದ್ದೆ..ಆದ್ರೆ ಆ ಪುಣ್ಯಾತ್ಮ ನಾನು ಬಸ್ ಪಾಸಿಗೆ ಹಣ ಕೇಳಿದ್ದಾಗ ಇಲ್ಲಾ ಅಂದೋರು…ಪಬ್ ನಲ್ಲಿ ಬಾರ್ ನಲ್ಲಿ ಹುಡುಗಿಯರ ಮೇಲೆ ದುಡ್ಡು ಸುರಿತೀವಿ ಅಂತಾ ಬಡಾಯಿ ಬಿಡ್ತಿದ್ರು....ಸಿಕ್ಕಿದವರ ಜೊತೆ ಎಣ್ಣೆ ಹೊಡ್ಕೊಂಡು ಎಂಜಾಯ್ ಮಾಡ್ತಿದ್ರು ಆದ್ರೆ ಬಸ್ ಪಾಸಿಗೂ ದುಡ್ಡಿಲ್ದೆ ಪ್ರಾಮಾಣಿಕತೆ ಇಂದ ಇದ್ದೊರ್ಗೆ ಬಗಣಿ ಗೂಟ ಇಟ್ರು…
ನಾನ್ ಯಾಕ್ ಈ ಮಾತನ್ನ ನಿಮ್ಮಗಳ ಮುಂದೆ ಹೇಳ್ತಿದ್ದೀನಿ ಅಂದ್ರೆ , ದುಡ್ಡು ಒಬ್ಬ ವೇಶ್ಯೆ ಕೂಡ ಸಂಪಾದನೆ ಮಾಡ್ತಾಳೆ ಆದ್ರೆ ಅಂತವರಿಗೇನೆ ಕಾಳಜಿ ಅನ್ನೋದು ಇರುತ್ತೆ… ಅದೇ ಥರ ನೀವುಗಳು ಕೂಡ ನಿಮ್ಮ ಕ್ಷಣಿಕ ಸುಖಕ್ಕಾಗಿ ಕಾಸನ್ನು ಬಿಸಾಕಿ ಎಸೆಯೋ ಬದಲು, ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳೋ ಬದಲು , ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವ ಮೂಲಕ, ಇನ್ನೊಬ್ಬರ ಮನದಲ್ಲಿ ಖಾಯಂ ಆಗಿ ನೆಲೆಸೋ ಮೂಲಕ ಸಂತಸ ಕಾಣಿ…
.ನಾನು ನಿಮ್ಮ ವ್ಯಯಕ್ತಿಕ ಜೀವನದ ಬಗ್ಗೆ ಮಾತಾಡ್ತಿಲ್ಲ ಆದ್ರೆ ಅದರಬದಲು ಕೂಡ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಕೈ ಜೋಡಿಸಿ. ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ದಾತರಾಗಿ ಆಶಾಕಿರಣಗಳಾಗಿ..
ಯಾಕಂದ್ರೆ ಹಿಂದೆ ಶ್ರೀ ವಿಶ್ವೇಶ್ವರಯ್ಯ ಬೀದಿ ದೀಪದ ಬೆಳಕಲ್ಲಿ ಓದಿ ಅಸಾಮಾನ್ಯ ಇಂಜಿನಿಯರ್ ಆಗಿ ಇಂದು ನಮ್ಮೆಲ್ಲರ masterpiece ಆದ್ರು. ಆದ್ರೆ ಇವತ್ತು ಅದೇ ಥರ ಬೀದಿ ದೀಪದ ಕೆಳಗೆ ಕೂತು ಓದು ಅನ್ನೊದಿಕ್ಕೆ ಹಾಗಲ್ಲ…
ವಿದ್ಯಾರ್ಥಿ ಮಿತ್ರ ಡಾ. ಅಬ್ದುಲ್ ಕಲಾಂ ಅವರು ಕೂಡ ಅವರ ಬಾಲ್ಯದಲ್ಲಿ ಬೀದಿ ಬೀದಿಯಲ್ಲಿ ಪೇಪರ್ ಹಾಕೊಂಡು, ಓದಿ , ವಿಜ್ಞಾನಿಯಾಗಿ , ರಾಷ್ಟ್ರಪತಿಯಾಗಿ , ಅಲ್ಲದೆ ಒಬ್ಬ ಮಹಾನ್ ಪುರುಷ ಆಗಿ ಇವತ್ತು ನಮ್ಗೆಲ್ಲರಿಗೂ inspiration ಆಗಿದ್ದರೆ.. ಅಗಂತಾ ಇವಾಗ ನೀವು ಪೇಪರ್ ಹಾಕೊಂಡು ಓದಿ ಅಂತಾ ಹೇಳಕ್ಕೆ ಆಗಲ್ಲ…
ಲೆಕ್ಕಕ್ಕೆ ತಗೋಂಡ್ರೆ ಒಬ್ಬರಲ್ಲಾ ಸಾವಿರಾರು ಜನ ಸಿಕ್ತಾರೆ…ಆದ್ರೆ ಅಂದಿನ ಪರಿಸ್ಥಿತಿನೇ ಬೇರೆ ಇಂದಿನ್ ದುಸ್ಥಿತಿನೇ ಬೇರೆ , ಹಾಗಾಗಿ ನಾನು ಹೇಳೋದು ದುಂದು ವೆಚ್ಚಕ್ಕೆ ಅವಕಾಶ ಕೊಡೋ ಬದಲು , ಇನ್ನೊಬ್ಬರ ನಾಳಿನ ಶಿಕ್ಷಣ ಕ್ಕಾಗಿ ಸಹಾಯ ಮಾಡಿ ಅನ್ನೋದೆ ನನ್ನೊಬ್ನನ ಮಾತಲ್ಲ… ಸಕಲರಮಾತು…
ಇದು ಕೇವಲ ಬರೀ ಪಬ್ ಒಂದರಲ್ಲೆ ಮಾಡೋ ಕೆಲಸವಲ್ಲ… ಯಾವುದೋ ಕುದುರೆ ಬಾಲಕ್ಕೆ ಜೂಜುಕಟ್ಟಿ ಸೋಲುವ ಬದಲು, ಕಂಡೋರ್ ಜೊತೆ ಪಾರ್ಟಿ ಮಾಡಿ ಕುಡ್ಕೊಂಡು ಬೀಳೋ ಬದಲು , ಇದರಿಂದಲು ಕೂಡ ಸ್ವಲ್ಪ ಸ್ವಲ್ಪವೇ ದಾನದ ಮೂಲಕ ನಾಲ್ಕು ಮಕ್ಕಳ ಅಕ್ಷರದಾತ ನಾಗಬಹುದು… ಅದಕ್ಕಾಗಿ ಇನ್ನ ಮೇಲಾದ್ರು ದಯಮಾಡಿ ದುಂದು ವ್ಯಯ ಮಾಡುವ ಬದಲು ಸಮಾಜಮುಖಿಯಾಗಿ ಇರಿ…ನಿಮ್ ನಿಮ್ ಲೈಪು ನೀವು ಎಂಜಾಯ ಮಾಡಿ ಆದ್ರೆ ನಿಮ್ ಆ ಒಂದು ಕಾಸಿನ ದಾನದಿಂದ ಇನ್ನೊಬ್ಬನ ಮುಖದಲ್ಲಿ ಅರಳೋ ಮಂದಾಹಾಸವಾಗಿ… ನಾಳಿನ ಬಲಿ಼ಷ್ಠ ಭಾರತವಾಗಿ…
ದಾನಕಿಂತ ಶ್ರೇಷ್ಠ ದಾನ ವಿದ್ಯಾದಾನ…