ಲೈಫ್ ಸ್ಟೈಲ್
ಬಣ್ಣಗಳನ್ನೇ ಬದುಕಾಗಿಸಿಕೊಂಡ ಯುವ ಕಲಾವಿದ ‘ಪರಶುರಾಮ ಲಮಾಣಿ’
- ಅರುಣ್
ಪರಶುರಾಮ ಲಮಾಣಿ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಲಂಬಾಣಿ ಸಮುದಾಯದ ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬೆಳೆದುಬಂದ ಪರಶುರಾಮ್ ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣವನ್ನು ಗುಂಡೇನಹಳ್ಳಿ ಗ್ರಾಮದಲ್ಲಿ ಪೂರ್ತಿಗೊಳಿಸಿದರು.
ಚಿಕ್ಕ ವಯಸ್ಸಿನಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಪರಶುರಾಮ್ ರವರು ಅದನ್ನೇ ಮುಂದುವರಿಸಿಕೊಂಡು ದೃಶ್ಯಕಲಾ ಮೂಲ ಎರಡು ವರ್ಷಗಳ ಕಲಿಕಾ ಅವಧಿಯನ್ನು ಧಾರವಾಡದಲ್ಲಿ ಪೂರ್ತಿಗೊಳಿಸಿ ನಂತರ ದೃಶ್ಯ ಕಲಾ ಮಹಾವಿದ್ಯಾಲಯ ದಾವಣಗೆರೆಯಲ್ಲಿ ಕಲಿಕೆಯನ್ನು ಮುಂದುವರೆಸಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗ ಗೊಟಗೋಡಿಯಲ್ಲಿ ಪ್ರಸ್ತುತವಾಗಿ ಕಲಿಕೆಯನ್ನು ಪೂರ್ಣಗೊಳಿಸಿದ್ದಾರೆ.
ಇವರ ಮುಂದಿನ ಹಂತದ ಬೆಳವಣಿಗೆಗೆ ಸರ್ಕಾರದಿಂದ ಹಾಗೂ ಇಲಾಖೆಯ ವತಿಯಿಂದ ಸಹಕಾರ ಮತ್ತು ಪ್ರೋತ್ಸಾಹ ದೊರಕಿದ್ದೇ ಆದಲ್ಲಿ ಚಿತ್ರಕಲಾ ಮಾಧ್ಯಮದಲ್ಲಿ ಮತ್ತಷ್ಟು ಮಗದಷ್ಟು ಸಾಧನೆಯನ್ನು ಮಾಡುವ ಆಶಯ ಪರಶುರಾಮ ರವರದ್ದಾಗಿದೆ.
ಕಲಾಕೃತಿಗಳು
ಪರಶುರಾಮ್ ರವರು ಹೆಚ್ಚು ಆಸಕ್ತಿಯಿಂದ ರಚಿಸುವ ಕಲಾಕೃತಿಗಳಲ್ಲಿ ಭಾವ ಚಿತ್ರಗಳು. ಲಂಬಾಣಿ ಸೊಗಡನ್ನು ಬಿಂಬಿಸುವ ಚಿತ್ರಗಳು. ಜಲವರ್ಣ ಕಲೆ. ದೃಶ್ಯಕಲಾ ಜನಪದ. ಹಸೆ ಚಿತ್ರಕಲೆ. ಇನ್ನು ಮುಂತಾದ ಚಿತ್ರಕಲಾ ವಿಭಾಗದಲ್ಲಿ ವಿಷಯಗಳನ್ನು ಆಯ್ದುಕೊಂಡು ಅದರಲ್ಲಿ ತಮ್ಮ ಕೈಚಳಕವನ್ನು ತೋರಿಸುತ್ತಾ ಅತಿಸುಂದರವಾಗಿ ಬಿಂಬಿಸುವ ಕಲೆ ಪರಶುರಾಮ ಅವರದ್ದು.
ಭಾಗವಹಿಸಿದ ಸ್ಪರ್ಧಾ ವೇದಿಕೆಗಳು
ಸೋಲೋ ಶೋ
- ಪಿಕಾಕ್ ಆರ್ಟ್ ಗ್ಯಾಲರಿ ಮಿರಾಜ್ ( ಎಂಎಸ್)
ಗ್ರೂಪ್ ಶೋ
- 2014- ಧಾರವಾಡ ಜಿಲ್ಲಾ ಉತ್ಸವ ಧಾರವಾಡ.
- 2015- ಗೋರ್ಮೆಂಟ್ ಆರ್ಟ್ ಗ್ಯಾಲರಿ ಧಾರವಾಡ.
- 16-17 ಚಿತ್ರೋತ್ಸವ ಯುನಿವರ್ಸಿಟಿ ಕಾಲೇಜ್ ಆಫ್ ವಿಜುವಲ್ ಆರ್ಟ್ ದಾವಣಗೆರೆ.
- 2019- ಕಲಾ ಪಯಣ-01 ಆರ್ಟ್ ಗ್ಯಾಲರಿ ಧಾರವಾಡ.
- 2020 -ಕರ್ನಾಟಕ ಕಲಾ ವೈಭವ ರಾಣೇಬೆನ್ನೂರು.
- 2013-14 ಚಿತ್ರಕಲಾ ಸಂತೆ ಕರ್ನಾಟಕ ಚಿತ್ರಕಲಾ ಪರಿಷತ್ ಬೆಂಗಳೂರು.
- 2014- ಶಿರಸನಗಿ ಕಲಿಕಾ ದೇವಿ ಮಹೋತ್ಸವ ಆರ್ಟ್ ಪ್ರದರ್ಶನ ಶಿರಸನಗಿ.
- 2016- ಮೈಸೂರು ದಸರಾ ಆರ್ಟ್ ಪ್ರದರ್ಶನ ಮೈಸೂರು.
- 2017 – 46th ಅನುವಲ್ ಆರ್ಟ್ ಪ್ರದರ್ಶನ ಮಂಡ್ಯ ಆಯೋಜಿಸಿದವರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು.
- 2018- ಟ್ರೆಡಿಷನಲ್ ಪೇಂಟಿಂಗ್ ಕಾಂಪಿಟೇಶನ್ ಬೆಂಗಳೂರು GAFX-2018.
ವರ್ಕ್ ಶಾಪ್ಸ್
- 2016 – ಹಸೆ ಚಿತ್ತಾರ ಕಲಾ ಕಮ್ಮಟ ಆಯೋಜಿಸಿದವರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು.
- 2017 – ನಿಪಾತ್ಯ ಕಲಾ ಕಮ್ಮಟ ಆಯೋಜಿಸಿದವರು ಕರ್ನಾಟಕ. ಲಲಿತಕಲಾ ಅಕಾಡೆಮಿ ಬೆಂಗಳೂರು.
- 2019- ಅಂಬಾಮತ ಆರ್ಟ್ ಕ್ಯಾಂಪ್ ಆಯೋಜಿಸಿದವರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು.
ಶಿಬಿರಗಳು
- 2013- ಆರ್ಟಿಸ್ಟ್ ಕ್ಯಾಂಪ ಕರ್ನಾಟಕ ಯುನಿವರ್ಸಿಟಿ ಧಾರವಾಡ.
- 2016 – ಬಯಲುಸೀಮೆ ಆರ್ಟಿಸ್ಟ್ ಕ್ಯಾಂಪ್ ಆಯೋಜಿಸಿದವರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು.
- 2020 – ಕರ್ನಾಟಕ ಕಲಾ ವೈಭವ ಆರ್ಟ್ ಕ್ಯಾಂಪ್ ಆಯೋಜಿಸಿದವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.
ಲಭಿಸಿರುವ ಪ್ರಶಸ್ತಿ
- ಪ್ರಜಾವಾಣಿ ಯುವ ಸಾಧಕರ ಪ್ರಶಸ್ತಿ 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243