ದಿನದ ಸುದ್ದಿ
ಬದುಕು ಬೆತ್ತಲಾದಾಗ ; ಮೋಹದ ಬದುಕಿನೊಳಗೊಂದು ತ್ಯಾಗದ ಉತ್ಸವ | ಮಿಸ್ ಮಾಡ್ದೆ ಈ ಕಾದಂಬರಿ ಓದಿ..!
ಅಲ್ಟಿಮೇಟ್ ಮೈಂಡ್ ಬ್ಲೋಯಿಂಗ್ ಕಾದಂಬರಿ ಮ್ಯಾಜಿಕಲ್ 24 ಅಧ್ಯಾಯಗಳು…
ಎಲ್ಲವೂ ನಾನು ಅಂದುಕೊಂಡ ಹಾಗೆ ಆಗಬೇಕು, ಎಲ್ಲರೂ ನಾನು ಹೇಳಿದ ಹಾಗೆ ಕೇಳಬೇಕು, ಆತುರದ ನಿರ್ಧಾರ ಒಬ್ಬರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೆ ಎಂಬುದಕ್ಕೆ ‘ಕೀರ್ತಿ’ ಯ ಜೀವನ ಅತ್ಯುತ್ತಮ ಉದಾಹರಣೆಯಾಗಿದೆ. ಹೆಣ್ಣಿಗೆ ಹಟವಿರಬಾರದು ಗಂಡಿಗೆ ಚಟವಿರಬಾರದು ಅನ್ನೋದು ಗಾದೆ ಒಂದು ವೇಳೆ ಹೆಣ್ಣಿಗೆ ಹಟದ ಜೊತೆ ಚಟ ಇದ್ದರೆ ಏನಾಗುತ್ತದೆ.
ಜೀವನದಲ್ಲಿ ಎಲ್ಲವನ್ನು ಪಡೆದುಕೊಂಡೆ ಎಂದುಕೊಂಡ ಕೀರ್ತಿ ಐಷಾರಾಮಿ ಜೀವನವನ್ನು ಕಳೆದು ಕೊನೆಗೆ ತಾನೇ ಪಶ್ಚಾತ್ತಾಪವನ್ನು ಪಡುತ್ತಾಳೆ.ಕೊನೆಯ ಅಧ್ಯಾಯಗಳಲ್ಲಿ ನನಗೆ ಕಣ್ಣಂಚಿನಲ್ಲಿ ನೀರನ್ನು ತರಿಸಿತು.
ಮೊದಲ ಅಧ್ಯಾಯದಿಂದ ಕೊನೆಯ ಅಧ್ಯಾಯದವರೆಗೆ ಓದುಗನನ್ನು ಸೆಳೆಯುವಲ್ಲಿ ಲೇಖಕರ ಬರವಣಿಗೆಯ ಶೈಲಿ ಸಫಲತೆಯನ್ನು ಕಂಡಿದೆ. ತುಂಬಾ ಭಾವನಾತ್ಮಕವಾಗಿ ಲೇಖಕರು ಕಥೆಯನ್ನು ಚಿತ್ರಿಸಿದ್ದಾರೆ. ವಾಸ್ತವ ಪ್ರಪಂಚಕ್ಕೆ ಈ ಕಥೆಯು ತುಂಬಾ ಹತ್ತಿರವಾಗಿದೆ.
ಯುವಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡುವುದರಲ್ಲಿ ಲೇಖಕರು
‘ದೇವರಾಜು ಚನ್ನಸಂದ್ರ’ ಸರ್ ಅವರು ಯಶಸ್ವಿಯಾಗಿದ್ದಾರೆ.ನಾನು ನಿಮ್ಮನ್ನ ಶಿಕ್ಷಕರಾಗಿ ಮೋಟಿವೇಶನ್ ಸ್ಪೀಕರ್ ಆಗಿ ನೋಡಿದ್ದೆ ಲೇಖಕರಾಗಿ ನೋಡ್ತಾ ಇರೋದು ಕೂಡ ತುಂಬಾ ಸಂತೋಷದ ವಿಚಾರ.ಇನ್ನೂ ಹೆಚ್ಚಿನ ಸಾಹಿತ್ಯಕೃಷಿ ನಿಮ್ಮಿಂದ ನಡೆಯಲಿ ಅಂತ ನಾನು ಕೇಳಿಕೊಳ್ಳುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243