ದಿನದ ಸುದ್ದಿ
ರೈತಸಿರಿ ಯೋಜನೆ’ಯಡಿ ಸಿರಿಧಾನ್ಯ ಬೆಳೆದ ರೈತರಿಗೆ 16 ಕೋಟಿ 55 ಲಕ್ಷ ರೂಪಾಯಿ ನೇರ ನಗದು ವರ್ಗಾವಣೆ : ಸಚಿವ ಬಿ.ಸಿ. ಪಾಟೀಲ್
ಸುದ್ದಿದಿನ ಡೆಸ್ಕ್ : 2021-22ನೇ ಸಾಲಿನಲ್ಲಿ ’ರೈತಸಿರಿ ಯೋಜನೆ’ಯಡಿ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಸಿರಿಧಾನ್ಯ ಬೆಳೆದ 18 ಸಾವಿರ 276 ಫಲಾನುಭವಿಗಳಿಗೆ 16ಕೋಟಿ 55 ಲಕ್ಷ ರೂಪಾಯಿ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2022-23ನೇ ಸಾಲಿಗೆ ರೈತಸಿರಿ ಯೋಜನೆ ಮುಂದುವರೆಯಲಿದೆ. ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ಜಾರಿಗೊಳಿಸಿರುವ ’ರೈತ ಸಿರಿ ಯೋಜನೆ’ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
🌾 2021-22 ನೇ ಸಾಲಿನಲ್ಲಿ 'ರೈತಸಿರಿ ಯೋಜನೆ'ಯಡಿ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಸಿರಿಧಾನ್ಯ ಬೆಳೆದ 18,276 ಫಲಾನುಭವಿಗಳಿಗೆ ರೂ.16.55 ಕೋಟಿ ನೇರ ನಗದು ವರ್ಗಾವಣೆ.
🌾 2022-23 ನೇ ಸಾಲಿಗೆ ರೈತಸಿರಿ ಯೋಜನೆ ಮುಂದುವರೆಯಲಿದೆ. @DDChandanaNews | @nstomar | @ShobhaBJP | @BSBommai | @nalinkateel | @narendramodi
— Kourava B.C.Patil (@bcpatilkourava) May 22, 2022
ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು 'ರೈತ ಸಿರಿ ಯೋಜನೆ'
🌾 ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ 10,000 ರೂಪಾಯಿ ಪ್ರೋತ್ಸಾಹಧನ.
🌾 ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಪ್ರೋತ್ಸಾಹಧನ.#ರೈತಸಿರಿಯೋಜನೆ | #RaitaSiriYojana | @AgriGoI pic.twitter.com/nHJNqFvQAg
— Kourava B.C.Patil (@bcpatilkourava) May 22, 2022
ಜಾಗತಿಕವಾಗಿ ಏರಿಕೆಯಾಗುತ್ತಿರುವ ರಸಗೊಬ್ಬರ ಬೆಲೆಯಿಂದ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ 1.1 ಲಕ್ಷ ಕೋಟಿ ಹೆಚ್ಚುವರಿ ಸಬ್ಸಿಡಿ ಘೋಷಣೆ ಮಾಡಿದೆ.#ರೈತಸ್ನೇಹಿಮೋದಿಸರ್ಕಾರ pic.twitter.com/kPkuyCYJtJ
— Kourava B.C.Patil (@bcpatilkourava) May 22, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243