ದಿನದ ಸುದ್ದಿ
ಬೀದಿಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿ ಸ್ಥಗಿತ
ಸುದ್ದಿದಿನ,ದಾವಣಗೆರೆ : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿ ಮಾಡುವ ಬಗ್ಗೆ ಯಾವುದೇ ಗುತ್ತಿಗೆಯನ್ನು ನೀಡಿರುವುದಿಲ್ಲ.
ಮತ್ತು ಪಾಲಿಕೆ ಸಿಬ್ಬಂದಿ ವತಿಯಿಂದ ಇನ್ನೂ ಮುಂದೆ ನ.2 ರಿಂದ ಮುಂದಿನ ಆದೇಶದವರೆಗೆ ಸುಂಕ ವಸೂಲಾತಿ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಬೀದಿಬದಿ ವ್ಯಾಪಾರಸ್ಥರು ಮುಂದಿನ ಆದೇಶದವರೆಗೆ ಯಾರಿಗೂ ಸುಂಕವನ್ನು ಪಾವತಿಸಬಾರದೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243