ದಿನದ ಸುದ್ದಿ
ಕಮ್ಮಾರ ಜನಾಂಗವನ್ನು ಮರೆತ ಸರ್ಕಾರ
ಕಮ್ಮಾರ ಜನಾಂಗದ ಕಣ್ಣೀರನ್ನು ಒರೆಸಲು ವಿಫಲವಾಯಿತೇ ಅಥವಾ ಕಮ್ಮಾರ ಸಮುದಾಯವೇ ಅತಿ ದೊಡ್ಡ ಶ್ರೀಮಂತರ ಸಮುದಾಯವ೦ದು ನೀವೇ ನಿರ್ಧಾರ ಮಾಡಿಬಿಟ್ಟರೆ ಇತರ ಎಲ್ಲ ಜನಾಂಗಕ್ಕೂ ಹಾಗೂ ಎಲ್ಲ ತರೆದ ಸೌಲಭ್ಯವನ್ನು ಕೊಟ್ಟ ಸರ್ಕಾರ ಕಮ್ಮಾರ ಎಂಬ ಸಮುದಾಯವನ್ನು ತಿರಸ್ಕರಿಸುತ್ತಿರುವುದು ಆದರೂ ಯಾಕೆ.
ಆಟೋ, ಟ್ಯಾಕ್ಸಿ , ಅಗಸ, ಕ್ಷೌರಿಕರಿಗೆ
5ಸಾವಿರ ರೂಪಾಯಿ ಸಹಾಯಧನ..!
ಯಡ್ಡಿಯೂರಪ್ಪ ಘೋಷಣೆ. ಮಾಡಿದ್ದಾರೆ ಆದರೆ ಕಮ್ಮಾರ ಜನಾಂಗದ ಬಗ್ಗೆ ಮಾತಿಗಾದರೂ ಧ್ವನಿ ಎತ್ತಲಿಲ್ಲ. ಬೇರೆ ಸಮುದಾಯದ ಬೇರೆ ಸಮುದಾಯದವರಂತೆ ಇವರು ಕಮ್ಮಾರ ಜನಾಂಗದವರು ಮನುಷ್ಯರಲ್ಲವೇ ಅವರು ನೋವು ನಿಮಗೆ ತಿಳಿಯದೇ
ಬಿಸಿಲು ಬೆಂಕಿ ಕಾಣದೆ ಸುಡುವ ಬೆಂಕಿಯ ಕುಲುಮೆ ಒಳಗೆ ಬೇಯುತ್ತಿದ್ದಾರೆ ಕಮ್ಮಾರರು. ಕಮ್ಮಾರರು ಬದುಕಿದ್ದಾರೆ ಯಡಿಯೂರಪ್ಪನವರೇ ಸತ್ತಿಲ್ಲ ಅದನ್ನು ನೀವು ಮಾತ್ರ ಮರೆಯಬೇಡಿ .
ಕೋವಿಡ್ ನೈಂಟೀನ್ ಕೋರೋಣ ಎಂಬ ಮಹಾಮಾರಿಗೆ ಒಂದು ತಿಂಗಳ ಕಾಲ ಬಂದ್ ಆಗಿರುವ ರಾಜ್ಯದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಕಮ್ಮಾರ ಜನಾಂಗಕ್ಕೆ ಇದೆ. ಕಾರಣ ಬಡಿದರೆ ಕಬ್ಬಿಣ ಅವನಿಗೆ ಅಂದಿನ ಊಟ. ಇಲ್ಲದಿದ್ದರೆ ಅವನ ಗತಿಯೇನು ಏನಾಗಬೇಕು ಎಂಬುದನ್ನು ಯೋಚಿಸಿದ್ದೀರಾ.? ಎಲ್ಲರಂತೆ ಇವರು ಮನುಷ್ಯರಲ್ಲವೇ ಇದು ನಿಮಗೆ ಕಾಣಲಿಲ್ಲವೇ.? ಇನ್ನಾದರೂ ಮಾನ್ಯ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು ಕಮ್ಮಾರ ಜನಾಂಗವನ್ನು ಕಡೆಗಣಿಸಬೇಡಿ ದಯಮಾಡಿ ನಾವು ಮನುಷ್ಯರೇ ಇದ್ದೇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243