ದಿನದ ಸುದ್ದಿ
ಬಿಎಂಎಸ್ ಕಾಲೇಜಿನ ತರಗತಿಗಳು ಆರಂಭ
ಸುದ್ದಿದಿನ ಡೆಸ್ಕ್:ಯಲಹಂಕದ ಆವಲಹಳ್ಳಿಯಲ್ಲಿರುವ ಬಿಎಂಎಸ್ ತಾಂತ್ರಿಕ ಮಹಾ ವಿದ್ಯಾಲಯ ಮತ್ತು ಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ ಪ್ರಥಮ ವರ್ಷದ ಬಿಇ ಮತ್ತು ಬಿಆರ್ಕ್ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು ಅತಿಥಿಗಳಾದ ಡಾ. ಎಸ್.ಕೆ. ಶಿವಕುಮಾರ, ಟ್ರಸ್ಟಿ ಬಿಎಂಎಸ್ಇಟಿ ಮತ್ತು ಚೇರ್ಮನ್, ಬಿಓಜಿ ಬಿಎಂಎಸ್ಐಟಿ ಮತ್ತು ಬಿಎಂಎಸ್ಎಸ್ಎ, ಬೆಂಗಳೂರು (ನಿವೃತ್ತ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ) ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರು. ಮತ್ತು ಅಧ್ಯಕ್ಷರಾಗಿ ಡಾ. ಪಿ. ದಯಾನಂದ ಪೈ, ಟ್ರಸ್ಟಿ, ಬಿ.ಎಂ.ಎಸ್.ಇ.ಟಿ ಮತ್ತು ಚೇರ್ಮನ್, ಬಿಎಂಎಸ್ಸಿಇ, ಗೌರವ ಅತಿಥಿಗಳಾಗಿ ಶ್ರೀ. ಎಂ. ಮದನ್À ಗೋಪಾಲ್, ಐಎಎಸ್(ನಿವೃತ್ತ), ಮತ್ತು ಶ್ರೀ ಜೈಸಿಮ್ ಕೆ. ರಾವ್, ಸಂಸ್ಥಾಪಕರು, ಫೌಂಟೇನ್ ಹೆಡ್, ಬೆಂಗಳೂರು, ಮತ್ತು ಶ್ರೀ ಗೌತಮ್ ಕಲತ್ತೂರ್, ಬಿಎಂಎಸ್ ಇನ್ನೋಲ್ಯಾಬ್ಸ್ ಮತ್ತು ಡಾ. ಸಪನಾÀ ಪಾಪು, ನಿರ್ದೇಶಕರು, ಬಿಎಂಎಸ್ಎಸ್ಎ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಅತಿಥಿಗಳು ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು. ಸ್ವಾಗತ ಭಾಷಣವನ್ನು ಬಿಎಂಎಸ್ಐಟಿ&ಎಂ. ನ ಪ್ರಾಂಶುಪಾಲರಾದ ಡಾ. ಮೋಹನ್ ಬಾಬು ಜಿ.ಎನ್. ಮಾಡಿದರು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮೂರು ವಾರಗಳ ಇಂಡೆಕ್ಷನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ವಿವರಿಸಿದರು. ಡಾ. ಎಸ್.ಕೆ. ಶಿವಕುಮಾರ ಉದ್ಘಾಟಣ ಭಾಷಣದಲ್ಲಿ ಸಂಸ್ಥೆಯನ್ನು ಸ್ವಯತ್ತ ಸ್ಥಾನ ಪಡೆಯಲು ಮತ್ತು ವಿಶ್ವವಿದ್ಯಾಲಯವನ್ನಾಗಿ ಮಾಡಲು ಶ್ರಮಿಸೋಣ ಎಂದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು. ಅತಿಥಿಗಳಿಂದ ವಿಟಿಯು ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ವಿತರಿಸಲಾಯಿತು. ಶ್ರೀ ಎಂ. ಮದನ್ ಗೋಪಾಲ್ ಅವರು ಪ್ರಪಂಚದ ತಾಂತ್ರಿಕ ಕ್ಷೇತ್ರದಲ್ಲಿನ ಬದಲಾವಣೆಯ ವೇಗಕ್ಕನುಗುಣವಾಗಿ ವೈವಿದ್ಯತೆಯ ಆಲೋಚನೆಗಳನ್ನು ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರಲು ಕರೆನೀಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಡಾ. ಪಿ. ದಯಾನಂದ ಪೈ ಅವರು, ವಿದ್ಯಾರ್ಥಿಗಳನ್ನುದ್ದೇಶಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಆಸಕ್ತಿ, ಸುಲೋಚನೆ, ಸಮಯದ ಸದುಪಯೋಗ ಪಡಿಸಿಕೊಂಡು ಉತ್ತಮ ತಂತ್ರಜ್ಞರಾಗಲು ಹಿತವಚನ ನುಡಿದರು. ವಿದ್ಯಾರ್ಥಿಗಳು ಅವರ ಉತ್ತಮ ಜೀವನಕ್ಕಾಗಿ ಮಾದರಿ ವ್ಯಕ್ತಿಗಳ ಅನುಕರಿಸಿ, ಅವರಂತೆಯೇ ಉತ್ತಮ ಪ್ರಜೆಗಳಾಗಿ ಮುಂದೆಬರಲು ಕರೆನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಸಪನಾ ಪಾಪು, ವಂದನಾರ್ಪಣೆ ಅರ್ಪಿಸಿದರು. ಕೊನೆಯದಾಗಿ ರಾಷ್ಟ್ರಗೀತೆಯೊಂದಿಗೆ ಕಾಂiÀರ್iಕ್ರಮವನ್ನು ಮುಕ್ತಾಯಗೊಳಿಸಲಾಯಿತು.