/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ನಿರ್ಭಯ ಪ್ರಕರಣ | ನಟಿಯರ ಮೇಲಿದ್ದ ಕೇಸ್ ಕ್ಲೋಸ್

Published

on

ಸುದ್ದಿದಿನ ಡೆಸ್ಕ್ : ದೆಹಲಿಯ ನಿರ್ಭಯ ಪ್ರಕರಣದ ನಾಲ್ವರಲ್ಲಿ ಮೂವರು ಆರೋಪಿಗಳು ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ಭೂಮಿ ಪೆಡ್ನೆಕರ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

2012ರಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಮರಣ ದಂಡನೆ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ತೀರ್ಪನ್ನು ಸ್ವಾಗತಿಸಿ ಪ್ರಶಂಸಿಸಿದ್ದ ಬಾಲಿವುಡ್ ನಟಿಯರಾದ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ಭೂಮಿ ಪೆಡ್ನೆಕರ್ ವಿರುದ್ಧ ಮೂವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿ, ಈ ಪ್ರಕರಣ ಮರುಪರಿಶೀಲನೆಗೆ ಅರ್ಹವಾಗಿಲ್ಲ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರ ನಟಿಯರು ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ

“ವಿಳಂಬವಾದ್ರೂ ನ್ಯಾಯ ಒದಗಿಸಿದೆ. ಹೀನ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಸುಪ್ರೀಂ ಕೋರ್ಟ್ ದೊಡ್ಡ ಸಂದೇಶ ನೀಡಿದೆ. ನಿರ್ಭಯ ಇನ್ನಿಲ್ಲ, ಆದರೆ, ಉಳಿದವರಿಗೆ ನ್ಯಾಯ ಸಿಕ್ಕಂತಾಗಿದೆ ಎಂದಿದ್ದಾರೆ.

 

ಅನುಷ್ಕಾ ಶರ್ಮಾ

ಅವಳ ನೋವಿನಲ್ಲಿ ನಮ್ಮೆಲ್ಲರೂ ಉಳಿದಿದೆ ಎಂದು ಟ್ವಿಟ್ ಮಾಡಿದ್ದಾರೆ.

 

ಮನಿಷಾ ಕೊಯಿರಾಲಾ

ಈ ತೀರ್ಪು ನ್ಯಾಯಾಂಗದ ಮೇಲಿನ ನಮ್ಮೆಲ್ಲರ ನಂಬಿಕೆಯನ್ನು ಗಟ್ಟಿಗೊಳಿಸಿದೆ. Let’s’hope for safer future ಎಂದು ಟ್ವಿಟರ್ ನಲ್ಲಿ ಹೇಳಿಕೆ ದಾಖಲಿಸಿದ್ದಾರೆ.

ಡಯಾನಾ ಪೆಂಟಿ

ಕೊನೆಗೂ ನ್ಯಾಯವೇ ಗೆದ್ದಿದ್ದೆ. ಈ ತೀರ್ಪು ಮಾದರಿಯಾಗಿ ಉಳಿಯಲಿದೆ ಎಂದಿದ್ದಾರೆ.

ಭೂಮಿ ಪೆಡ್ನೆಕರ್

ಇದೊಂದು ಅನಾಗರಿಕ ಅಪರಾಧವಾಗಿದೆ. ಅಂತಿಮವಾಗಿ ನ್ಯಾಯವೇ ಗೆದ್ದಿದೆ ಎಂದು ಹೇಳಿಕೆ ನೀಡಿದ್ದಾರೆ.

ಈಶಾ ಗುಪ್ತಾ

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ವಿರುದ್ಧದ ಮನವಿ ತಿರಸ್ಕರಿಸಿದಕ್ಕೆ ಸುಪ್ರೀಂ ಕೋರ್ಟ್ಗೆ ಧನ್ಯವಾದಗಳು. ಆದರೆ, ನ್ಯಾಯ ವಿಳಂಬವಾಗಿದೆ‌. ಬಿಡುಗಡೆಗೊಂಡ ಬಾಲಾಪರಾಧಿಗಳಿಗೂ ಶಿಕ್ಷೆ ವಿಧಿಸುವ ಅಗತ್ಯವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version