ದಿನದ ಸುದ್ದಿ

ಹಣದುಬ್ಬರ ನಿಯಂತ್ರಿಸಲು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ, ಅಕ್ಕಿ ಮಾರಾಟಕ್ಕೆ ಕೇಂದ್ರ ಸರ್ಕಾರ ನಿರ್ಧಾರ

Published

on

ಸುದ್ದಿದಿನ, ದೆಹಲಿ : ಭಾರತ ಸರ್ಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಭಾಗವಾಗಿ, ಹಣದುಬ್ಬರ ಪ್ರವೃತ್ತಿಗಳನ್ನು ನಿಯಂತ್ರಿಸಲು ಮತ್ತು ಹೆಚ್ಚುತ್ತಿರುವ ಗೋಧಿ ಮತ್ತು ಅಕ್ಕಿಯ ಬೆಲೆಯನ್ನು ನಿಯಂತ್ರಿಸಲು, ಭಾರತೀಯ ಆಹಾರ ನಿಗಮದ ಮೂಲಕ ಗೋಧಿ ಮತ್ತು ಅಕ್ಕಿಯ ಮುಕ್ತ ಮಾರುಕಟ್ಟೆ ಮಾರಾಟವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

2023-24ರ ಹಣಕಾಸು ವರ್ಷದ ಮೊದಲ ಹರಾಜು 2023ರ ಜೂನ್ 28 ರಂದು ನಡೆಯಲಿದೆ. ಈ ಒಎಂಎಸ್‌ಎಸ್ ನಲ್ಲಿ, ಬಿಡ್ ಮಾಡುವವರು ಒಂದೇ ಬಿಡ್‌ನಲ್ಲಿ ಖರೀದಿಸಬಹುದಾದ ಪ್ರಮಾಣವು 10-100 ಮೆಟ್ರಿಕ್ ಟನ್ ಗಳವರೆಗೆ ಇರುತ್ತದೆ.

ಹಿಂದಿನ ಮಾರಾಟದ ಸಮಯದಲ್ಲಿ ಖರೀದಿದಾರರಿಗೆ ಪ್ರತಿ ಬಿಡ್‌ಗೆ ಗರಿಷ್ಠ 3000 ಮೆಟ್ರಿಕ್ ಟನ್ ಅನುಮತಿಸಲಾಗಿತ್ತು. ಹೆಚ್ಚಿನ ಸಣ್ಣ ಮತ್ತು ಅತಿಸಣ್ಣ ಖರೀದಿದಾರರಿಗೆ ಸ್ಥಳಾವಕಾಶ ಕಲ್ಪಿಸಲು ಮತ್ತು ಯೋಜನೆಯ ವ್ಯಾಪಕ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಈ ಬಾರಿ ಪ್ರಮಾಣಗಳನ್ನು ಕಡಿಮೆ ಮಾಡಲಾಗಿದೆ.

ಇದು ಒಎಂಎಸ್‌ಎಸ್ ಅಡಿಯಲ್ಲಿ ಮಾರಾಟವಾದ ದಾಸ್ತಾನಗಳನ್ನುಸಾರ್ವಜನಿಕರಿಗೆ ತಕ್ಷಣ ತಲುಪಲು ಅನುವು ಮಾಡಿಕೊಡುತ್ತದೆ. ಕೇಂದ್ರ ಸಂಗ್ರಹದಲ್ಲಿ ಸಾಕಷ್ಟು ದಾಸ್ತಾನು ಮಟ್ಟವನ್ನು ಖಚಿತಪಡಿಸಿಕೊಳ್ಳುವಾಗ ಹಣದುಬ್ಬರ ಪ್ರವೃತ್ತಿಗಳನ್ನು ನಿಯಂತ್ರಣದಲ್ಲಿಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ಬಾರಿ ರಾಜ್ಯ ಸರ್ಕಾರಗಳ ಯೋಜನೆಯನ್ನು ಒಎಂಎಸ್‌ಎಸ್ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version