ದಿನದ ಸುದ್ದಿ
ಚಿತ್ರದುರ್ಗ ಮುರುಘ ಮಠ | ಅತಿ ದೊಡ್ಡ ಬಸವೇಶ್ವರರ ಕಂಚಿನ ಪತ್ರಿಮೆಗೆ ಹೆಚ್ಚುವರಿ 10 ಕೋಟಿ ರೂ ಬಿಡುಗಡೆ
ಸುದ್ದಿದಿನ ಡೆಸ್ಕ್ : ಚಿತ್ರದುರ್ಗದ ಮುರುಘ ಮಠದಿಂದ ನಿರ್ಮಿಸಲಾಗುತ್ತಿರುವ ಅತಿ ದೊಡ್ಡ ಬಸವೇಶ್ವರರ ಕಂಚಿನ ಪತ್ರಿಮೆಗೆ 20 ಕೋಟಿ ರೂಪಾಯಿ ನೀಡಲಾಗಿದ್ದು, ಹೆಚ್ಚುವರಿಯಾಗಿ 10 ಕೋಟಿ ರೂಪಾಯಿಗಳ ಬಿಡುಗಡೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಯಾನ ಲ್ಯಾಡಿಂಗ್ ಗೆ ಅನುಕೂಲವಾಗುವಂತೆ ಮೂಲಸೌಲಭ್ಯಗಳನ್ನು ಸೃಷ್ಟಿಸಲು ಹೆಚ್ಚುವರಿಗೆ 65 ಕೋಟಿ ರೂಪಾಯಿ ನೀಡಲಾಗುತ್ತಿದೆ. ಈ ಮೊದಲ 384 ಕೋಟಿ ರೂಪಾಯಿಗಳನ್ನು ಒದಗಿಸಲಾಗಿತ್ತು ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243