ರಾಜಕೀಯ
ನನ್ನ ಆರೋಗ್ಯಕ್ಕಿಂತ ಜನ ಸೇವೆ ಮುಖ್ಯ : ಎಚ್.ಡಿ.ಕೆ ಭಾವುಕ ನುಡಿ
ಸುದ್ದಿದಿನ,ಮೈಸೂರು : ನಾನು ಯಾವುದೇ ರಾಜಕೀಯ ಅರ್ಥದಲ್ಲಿ ಹಾಗೇ ಮಾಡಿಲ್ಲ. ನಾನು ಭಾವ ಜೀವಿ ಅನ್ನೋದು ಎಲ್ಲರಿಗೂ ಗೊತ್ತು. ನಾನು ಬದುಕಿರುವವರೆಗೆ ಜನರ ಸೇವೆ ಮಾಡುತ್ತೇನೆ ಅನ್ನೋ ಅರ್ಥದಲ್ಲಿ ಮಾತನಾಡಿದ್ದೆ, ಆದರೆ ಕೆಲವರು ಸರ್ಕಾರದ ಹೆಸರಿಗೆ ಮಸಿ ಬಳಿಯಲು ಇಲ್ಲ ಸಲ್ಲದ ಹೇಳಿಕೆ ನೀಡ್ತಿದ್ದಾರೆ ಎಂದು ನಿನ್ನೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಯಮೋಷನಲ್ ಭಾಷಣ ವಿಚಾರವಾಗಿ ಇಂದು ಮೈಸೂರಿನಲ್ಲಿ ಮಾತನಾಡಿದರು.
ಸರ್ಕಾರದ ಅರ್ಥಿಕ ಪರಿಸ್ಥಿತಿ ಸರಿಯಿಲ್ಲ ಅಂತ ಕಾಂಗ್ರೆಸ್ ಶಾಸಕ ಹೇಳಿರೋದು ನನಗೆ ಗೊತ್ತು.ಅವರಿಗೆ ಆ ಮಾಹಿತಿ ಎಲ್ಲವನ್ನು ಯಾರು ಕೊಟ್ಟರು. ನನ್ನ ಸರ್ಕಾರ ಸುಭದ್ರವಾಗಿದೆ ಎಲ್ಲ ಯೋಜನೆಗಳಿಗೆ ಹಣ ನೀಡಲಾಗ್ತಿದೆ. ನನ್ನ ಖಜಾನೆಯಲ್ಲಿ ಭಾಗ್ಯಲಕ್ಷ್ಮೀಯನ್ನ ಜನ ತುಂಬಿಸಿ ಇಟ್ಟಿದ್ದಾರೆ ಎಂದರು.
ಹಾಗೇ ನಾನೊಬ್ಬ ಭಾವನಾತ್ಮಕ ಜೀವಿಯಾಗಿದ್ದೇನಿ. ನಾನು ಈ ಭೂಮಿ ಮೇಲೆ ಬದುಕಿರುವವರೆಗೆ ಜನರ ಸೇವೆ ಮಾಡುತ್ತೇನೆ. ಡಾಕ್ಟರ್ ರೆಸ್ಟ್ ಮಾಡಲು ಹೇಳಿದ್ದಾರೆ ಆದ್ರೆ ನಾನು ಮಾಡಬೇಕದ ಕೆಲಸಗಳಿವೆ ಆದರೂ ನನ್ನ ಆರೋಗ್ಯಕ್ಕಿಂತ ನನಗೆ ಜನರ ಸೇವೆ ಮುಖ್ಯ ಎಂದು ಭಾವುಕರಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401