ರಾಜಕೀಯ

ನನ್ನ ಹಾಗೂ ಜನರ ನಡುವೆ ಕಂದಕ ಸೃಷ್ಟಿಸ ಬೇಡಿ | ಮಾಧ್ಯಮಗಳ ಮೇಲೆ ಹರಿಹಾಯ್ದ ಹೆಚ್ ಡಿ ಕೆ

Published

on

ಸುದ್ದಿದಿನ, ಬೆಂಗಳೂರು | ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇವಲ ಒಂದು ರೂಪಾಯಿ ಹೆಚ್ಚಾಗಿದ್ದಕ್ಕೆ ಮಂಗಳೂರಿನ ಮೀನುಗಾರ ಮಹಿಳೆಯರ ಬಳಿ “ಕುಮಾರಸ್ವಾಮಿ ಈಸ್ ನಾಟ್ ಅವರ್” ಎಂದು ಹೇಳಿಸುತ್ತಿದ್ದೀರಿ ಎಂದು ಮಾಧ್ಯಮಗಳ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ‌ ನಡೆಸಿದರು.

ಇಂದು (ಜುಲೈ14) ನಗರದ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸಚಿವರು, ಶಾಸಕರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ” ನನ್ನ ಮೇಲೆ ನಿಮಗೇಕೆ ಇಷ್ಟು ಕೋಪ, ಪ್ರಧಾನಿ ನರೇಂದ್ರ ಮೋದಿ ಹನ್ನೊಂದು ಬಾರಿ ಇಂಧನದ ಬೆಲೆ ಏರಿಕೆ ಮಾಡಿದ್ದರೂ ಸಣ್ಣಚಕಾರ ಎತ್ತಿಲ್ಲ. ಎಷ್ಟು ದಿನ ಅಂತಾ ನೀವು ನನ್ನ ವಿರುದ್ದ ಜನರನ್ನು ಎತ್ತಿಕಟ್ಟುತ್ತೀರಿ. ನಾನು ಆ ಜನಗಳ ಮಧ್ಯೆಯೇ ಹೋಗುತ್ತೇನೆ. ನಿಮ್ಮ ಕಷ್ಟ ಏನು ಅಂತಾ ಕೇಳ್ತೇನೆ”. ಎಂದು ಖಡಕ್ ಆಗಿ ಮಾದ್ಯಮಗಳ ವರ್ತನೆಯ ಬಗೆಗೆ ಬೇಸರ ವ್ಯಕ್ತಪಡಿಸಿದರು

ನಾನು ಜನರ ಮುಖ್ಯಮಂತ್ರಿ ಹೆಚ್ ಡಿ.ಕೆ
ನಾನು ಜನ ಸಾಮಾನ್ಯರ ಪರವಾಗಿದ್ದೇನೆ.
ಜನರ ಹೊಟ್ಟೆ ಮೇಲೆ ಹೊಡೆದು ತೆರಿಗೆ ಸಂಗ್ರಹಿಸಬೇಕಿಲ್ಲ. ವಿದ್ಯುತ್ ಬಿಲ್ ಹತ್ತು ರೂಪಾಯಿ ಏರಿಕೆ ಮಾಡಿದ್ದೇನೆ.ಇಂದು ಬಡ ಕುಟುಂಬಗಳು ಕೂಡ ಇಪ್ಪತ್ತು ರೂಪಾಯಿ ಕೊಟ್ಟು ಮಿನರಲ್ ವಾಟರ್ ಖರೀಧಿಸುತ್ತಾರೆ. ಅಂತಹುದರಲ್ಲಿ ಹತ್ತು ರೂಪಾಯಿ ದೊಡ್ಡ ಮೊತ್ತವೇ. ಸರ್ಕಾರದಲ್ಲಿ ದುಡ್ಡು ಇಟ್ಡುಕೊಳ್ಳದೆ ನಾನು ಎಲ್ಲಿಂದ ಕಾರ್ಯಕ್ರಮಗಳನ್ನು ಕೊಡಲಿ ಎಂದು ಮಾಧ್ಯಮಗಳಿಗೆ ಕುಟುಕಿದರು.

ನಾನು ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳಾಗಿದೆ. ನನಗೆ ಸ್ವಲ್ಪ ಸಮಯಕೊಡಿ.
ನಾನು ಯಾರಿಗೂ ಮೋಸ ಮಾಡಲ್ಲ.
ಜನರಿಗೆ ತೊಂದರೆ ಕೊಡಬೇಕು ಎಂದು ಕಾಂಗ್ರೆಸ್ ಮೈತ್ರಿಯೊಂದಿಗೆ ಮುಖ್ಯಮಂತ್ರಿ ಯಾಗಿಲ್ಲ. ನಮ್ಮ ವಿಷನ್ ಗಳ ಬಗ್ಗೆ ನನ್ನ ಕಣ್ತೆರೆಸಿ. ನಾನು ಯಾವುದೋ ಒಂದು ಭಾಗದ ಸಿಎಂ ಅಲ್ಲ. ಎರಡು ತಿಂಗಳಿಂದ ಟೀಕೆ ಮಾಡಿದ್ದು ಸಾಕು. ರೈತರ ಸಾಲ ಮನ್ನಾ ವಿಷಯದಲ್ಲಿ ನಾನು ಹುಡುಕಾಟ ಆಡಲು ಸಾಧ್ಯವೇ 35,000 ಕೋಟಿ ಸಾಲ ಮನ್ನಾ ಸುಲಭವಲ್ಲ. ನಿಮಗೇಕೆ ಅನುಮಾನ.ನಿಮಗೆ ಯಾವುದೇ ಅನುಮಾನ ಇದ್ದರೂ ಬನ್ನಿ ನೇರವಾಗಿ ನನಗೆ ಹೇಳಿ. ನನ್ನ ತಪ್ಪು ಸರಿಪಡಿಸಿಕೊಳ್ಳಲು ಸಿದ್ದವಿದ್ದೇನೆ.
ತಪ್ಪೇ ಮಾಡದೆ ದೋಷ ಕೊಡಬೇಡಿ.
ನನ್ನ ಹಾಗೂ ಜನರ ನಡುವೆ ಕಂದಕ ಸೃಷ್ಟಿಸಬೇಡಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version