ದಿನದ ಸುದ್ದಿ
ಸಿದ್ದರಾಮಯ್ಯ ಈಗಲೂ ಮುಖ್ಯಮಂತ್ರಿ: ಪುಟ್ಟರಂಗಶೆಟ್ಟಿ ಹೇಳಿಕೆ
ಸುದ್ದಿದಿನ ಡೆಸ್ಕ್: ಸಿಎಂ ಆಗಿ ಕುಮಾರಸ್ವಾಮಿ ಇದ್ದರೂ ನನಗೆ ಈಗಲು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳು ಎಂದು ದಾವಣಗೆರೆಯಲ್ಲಿ ಹಿಂದುಳಿದ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ.
ಜಿ.ಪಂ ಅಧ್ಯಕ್ಷನಾದರೆ ಸಾಕು ಅನ್ಕೊಂಡಿದ್ದೆ. ಆದರೆ, ಸಿದ್ದರಾಮಯ್ಯನವರು ನನಗೆ ಟಿಕೆಟ್ ಕೊಟ್ಟು ನನ್ನನ್ನು ಗೆಲ್ಲಿಸಿದರು. ಸಚಿವನಾಗಿ ಮಾಡಿದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಹಿಂದುಳಿದ ಜನಾಂಗದವರು ಅಭಿವೃದ್ಧಿ ಆಗುತ್ತಿರುವುದಕ್ಕೆ ಹಿಂದುಳಿದ ಸಿಎಂಗಳೇ ಕಾರಣ. ಉಪ್ಪಾರ ಜನಾಂಗಕ್ಕೆ ಹಲವು ಸೌಲಭ್ಯ ಕಲ್ಪಿಸಿದ್ದಾರೆ ಎಂದು ಹೇಳಿದ್ದಾರೆ.