ದಿನದ ಸುದ್ದಿ
ಬೆಂಗಳೂರು ಸಿಸಿಬಿ ಪೊಲೀಸ್ರ ಮೇಲೆಯೇ ದೂರು ದಾಖಲು ; ಯಾಕೆ ಗೊತ್ತಾ..!?
ಸುದ್ದಿದಿನ ಡೆಸ್ಕ್ : ಬೆಂಗಳೂರು ಸಿಸಿಬಿ ಪೊಲೀಸ್ರ ಮೇಲೆಯೇ ದಾಖಲಾಯ್ತು ಪ್ರಕರಣ. ಇಬ್ಬರು ಸಿಸಿಬಿ ಇನ್ಸಪೆಕ್ಟರ್ ಒಬ್ಬ ಸಬ್ ಇನ್ಸಪೆಕ್ಟರ್ ಮೇಲೆ ಎಪ್ ಐ ಆರ್ ದಾಖಲಾಗಿದೆ.
ನ್ಯಾಯಾಲಯದ ಅದೇಶದಂತೆ ಸಿಸಿಬಿ ಮೇಲೆ ದೂರು ಮಾರ್ಚ್ 24 ರಂದು ಸಿಸಿಬಿ ಜಿತೇಶ್ ಎಂಬವರ ರಿಕ್ರಿಯೇಶನ್ ಕ್ಲಬ್ ಮೇಲೆ ದಾಳಿ ಮಾಡಿತ್ತು, ಅಲ್ಲದೆ ಜಿತೇಶರನ್ನ ಬಂಧಿಸಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಜಿತೇಶ್ ಅವರು ಆಕ್ರಮ ಬಂಧನ ಮಾಡಲಾಗಿದೆ ಎಂದು ದಾವೆ ಹೂಡಿದ್ದರು. ಕೊನೆಗೂ ಸಿಸಿಬಿ ವಿರುದ್ದ ದೂರು ದಾಖಲಿಸಲು ಅನುಮತಿಸಿದ ಕೋರ್ಟ್ಐಪಿಸಿ341 384 441ಆಡಿಯಲ್ಲಿ ಬಸವೇಶ್ವರ ನಗರ ಠಾಣೆಯಲ್ಲಿ ಇನ್ಸಪೆಕ್ಟರ್ ರಮೇಶ್ ರಾವ್, ಪ್ರಕಾಶ್ ಹಾಗೂ ಸಬ್ ಇನ್ಸಪೆಕ್ಟರ್ ಅಶ್ವಥಯ್ಯ ಮೇಲೆ ದೂರು ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401