ದಿನದ ಸುದ್ದಿ

ಪ್ರಜಾ ಪರಿವರ್ತನಾ ವೇದಿಕೆ | ಸೆ.24 ರಂದು ‘ಸಂವಿಧಾನ ಯಾರ ಹೊಣೆ..? ಸಮ್ಮೇಳನ : ಎ.ಡಿ. ಈಶ್ವರಪ್ಪ

Published

on

ಸುದ್ದಿದಿನ, ದಾವಣಗೆರೆ : ಪ್ರಜಾ ಪರಿವರ್ತನಾ ವೇದಿಕೆಯಿಂದ ‘ಸಂವಿಧಾನ ರಕ್ಷಣೆ ಯಾರ ಹೊಣೆ?’ ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಸಮ್ಮೇಳನವನ್ನು ಸೆ.24ರಂದು ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ‌. ಈಶ್ವರಪ್ಪ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಹುಸಂಖ್ಯಾತ ಜಾತಿ ಗಳು, ಹತ್ತಾರು ಧರ್ಮ ದವರು ವಾಸ ಮಾಡುತ್ತಿರುವ ನಮ್ಮ ದೇಶಕ್ಕೆ ಉತ್ತಮ ವಾದ ಜಗತ್ತಿನ ಎಲ್ಲ ದೇಶಗಳು ಹೊಗಳುವ ಲಿಖಿತ ಸಂವಿಧಾನ ವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿ ದೇಶಕ್ಕೆ ಸಮರ್ಪಿಸಿದ್ದಾರೆ. ಭಾರತೀಯರಾದ ನಾವೆಲ್ಲರೂ ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ. ಸಮಾನತೆ, ರಕ್ಷಣೆ, ಉದ್ಯೋಗ ಮತ್ತು ಶಿಕ್ಷಣ ದ ಮೀಸಲಾತಿ ಇವೆಲ್ಲವೂ ಬಾಬಾ ಸಾಹೇಬರ ಸಂವಿಧಾನದ ಕೊಡುಗೆ ಯಾಗಿದೆ ಎಂದು ನುಡಿದರು.

ಇತ್ತೀಚೆಗೆ ಸಂವಿಧಾನ ಬದಲಾವಣೆ ಮಾಡಬೇಕು, ಎಸ್ ಸಿ ಎಸ್ ಟಿ ಮೀಸಲಾತಿ ರದ್ದು ಮಾಡಬೇಕು ಎಂದು ದೇಶದಾದ್ಯಂತ ಮನುವಾದಿ ಸಂಘಟನೆ ಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿವೆ. ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳುವವರಿಗೆ ಸಂವಿಧಾನದ ಬಗ್ಗೆ ಪೂರ್ಣ ಮಾಹಿತಿ ಇದೆ. ಆದರೆ ಸಂವಿಧಾನದ ನೇರ ಫಲಾನುಭವಿಗಳಾದ, ಎಸ್ ಸಿ ಮತ್ತು ಎಸ್ ಟಿ, ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂವಿಧಾನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿರುವುದು ದುರಂತ. ಈ ಕೊರತೆಯನ್ನು ನೀಗಿಸಲು ತಾವು ತಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು, ಹಾಗೂ ಬಂಧುಗಳೊಂದಿಗೆ ಈ ಸಮ್ಮೇಳನದಲ್ಲಿ ಭಾಗವಹಿಸಲು ಕೋರಿದರು.

ಸುದ್ದಿ ಗೋಷ್ಟಿಯಲ್ಲಿ ಪ್ರಜಾ ಪರಿವರ್ತನಾ ವೇದಿಕೆಯ ಹೆಚ್,ಕೆ, ಕೃಷ್ಣ‌ಅರಕೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆ.ಓ. ಹನುಮಂತಪ್ಪ, ಸುನಿಲ್ ಯರಗನಾಳ್, ಜಿಲ್ಲಾ ವಿದ್ಯಾರ್ಥಿಮುಖಂಡ ಸಿದ್ದಪ್ಪಸಿಂಗಟಗೆರೆ, ನಾಗರಾಜ್ ಮಾದೇನಹಳ್ಳಿ ಅಣ್ಣಪ್ಪ ಚಿಕ್ಕಹಾಲಿವಾಣ,ಮಮತಾ ಕುರುವ, ಹೊನ್ನಾಳಿ ತಾಲೂಕ್ ಮಹಿಳಾ ಅಧ್ಯಕ್ಷೆ, ಸರಸ್ವತಿ ಬೇಲಿಮಲ್ಲೂರು, ಹೊನ್ನಾಳಿ ತಾಲೂಕ್ ಮಹಿಳಾ ಪ್ರಧಾನ ಕಾರ್ಯದರ್ಶಿ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version