ರಾಜಕೀಯ
ಕಾಂಗ್ರೆಸ್, ಬಿಜೆಪಿ ಮೇಲೆ ವಾಗ್ದಾಳಿ | ಟಿಡಿಪಿ ಸಂಸದ ಜಯದೇವ ಗಲ್ಲಾ
ಸುದ್ದಿದಿನ, ದೆಹಲಿ|ಟಿಡಿಪಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದೆ. ಆದರೆ ಟಿಡಿಪಿ ತನ್ನ ಬೆಂಬಲಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಅವಿಶ್ವಾಸ ಗೊತ್ತುವಳಿ ಕುರಿತ ಸಮಯದಲ್ಲಿ ಚರ್ಚೆಗೆ ಮುಂದಾದ ಟಿಡಿಪಿ ಪರ ಸಂಸದ ಜಯದೇವ ಗಲ್ಲಾ ಅವರು ಕಾಂಗ್ರೆಸ್ ಸರ್ಕಾರ ಆಂದ್ರಪ್ರದೇಶ ವಿಭಜನೆ ಮಾಡಿದ್ದಕ್ಕಾಗಿ ಗರಂ ಆಗಿ ಕಾಗ್ರೆಸ್ ವಿರುದ್ಧ ಮಾತನಾಡಿದರು.
ನಮಗೆ ಯಾವದೇ ರಾಜಧಾನಿಯೂ ಇಲ್ಲ, ಆದಾಯವೂ ಇಲ್ಲ. ಆದರೆ ಆದಾಯ ತೆಲಂಗಾಣಕ್ಕೆ, ಸಾಲ ಮಾತ್ರ ನಮಗೆ ಕೊಡಲಾಗಿದೆ ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, ಜನಾರ್ಧನ ರೆಡ್ಡಿ ಕುಟುಂಬದ ವಿರುದ್ಧ ಸುಮಾರು ಪ್ರಕರಣಗಳಿವೆ ಆದರೆ ಮೋದಿ ಸರ್ಕಾರ ಏಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದು ಪ್ರಶ್ನಿಸಿದರು.
ಇದಷ್ಟೇ ಅಲ್ಲದೆ ಮೋದಿ ಸರ್ಕಾರ ಆಂದ್ರ ಪ್ರದೇಶದ ಅಭಿವೃದ್ಧಿಗಾಗಿ ಯಾವ ಕಾರ್ಯವನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401