ರಾಜಕೀಯ
ಪಬ್ಲಿಕ್ ರಂಗಣ್ಣನನ್ನು ಹುಚ್ಚ ಎಂದ ಅಟ್ಯಾಕ್ ಅರ್ಜುನ್
ಸುದ್ದಿ ದಿನ ಡೆಸ್ಕ್: ಪಬ್ಲಿಕ್ ಟಿವಿ ಸಂಪಾದಕ ಹೆಚ್ ಆರ್ ರಂಗನಾಥ್ ಅವರನ್ನು ಫೆಸ್ಬುಕ್ನಲ್ಲಿ ಟೀಕಿಸಿರುವ ಕಾಂಗ್ರೆಸ್ ಬೆಂಬಲಿಗನೊಬ್ಬನ ವಿಡಿಯೊ ವೈರಲ್ ಆಗಿದೆ.
ತನ್ನನ್ನು ಅಟ್ಯಾಕ್ ಅರ್ಜುನ್ ಎಂದು ಪರಿಚಯಿಸಿಕೊಳ್ಳುವ ಈತ ರಂಗನಾಥ್ ಅವರನ್ನು ಏಕ ವಚನದಲ್ಲಿ ಟೀಕಿಸಿದ್ದಾನೆ.
‘ರಂಗನಾಥ್ ಅವರೇ ನಿಮಗೇನಾದ್ರು ಮಾನ ಮರ್ಯಾದೆ ಇದೆಯಾ? ನೀನೊಬ್ಬ ಹುಚ್ಚ, ಸುದ್ದಿ ನಿರೂಪಣೆ ಪ್ರಾಥಮಿಕ ತಂತ್ರಗಳೂ ನಿನಗೆ ಗೊತ್ತಿಲ್ಲ. ನೀನು ಮತ ಹಾಕದೆ ಬಂದು ಜನಕ್ಕೆ ಏನು ಪಾಠ ಹೇಳ್ತಿಯಾ?’ ಎಂದು ಕ್ಲಾಸ್ ತೆಗೆದುಕೊಂಡಿದ್ದಾನೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದಲ್ಲಿ ಹಣಕಾಸು ಸಚಿವ ಸ್ಥಾನ ಯಾರಿಗೆ ನೀಡಬೇಕೆಂಬ ಚರ್ಚೆಯೊಂದರಲ್ಲಿ ರಂಗನಾಥ್ ಅವರು ಕಾಂಗ್ರೆಸ್ ನಾಯಕರು ಹಾಗು ಪಕ್ಷ ಕುರಿತು ಕಟುವಾಗಿ ಮಾತನಾಡಿದ್ದರು. ಇದರಿಂದ ಕೆಂಡಾ ಮಂಡಲವಾದ ಅರ್ಜುನ್ ಎಂಬ ಕಾರ್ಯಕರ್ತ ತನ್ನ ಆಕ್ರೋಶವನ್ನು ವಿಡಿಯೊದಲ್ಲಿ ವ್ಯಕ್ತಪಡಿಸಿದ್ದಾನೆ.