ದಿನದ ಸುದ್ದಿ
ಕೊರೋನಾ ಪಾಸಿಟಿವ್ ವರದಿ ಕೊಟ್ಟ ಲ್ಯಾಬ್ ಟೆಕ್ನೀಶಿಯನ್ ಮೇಲೆ ಸೋಂಕಿತನಿಂದ ಹಲ್ಲೆ
ಸುದ್ದಿದಿನ, ಹಾಸನ : ಜಿಲ್ಲೆಯ, ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕಿ ಗ್ರಾಮದಲ್ಲಿ ಸೆಪ್ಟೆಂಬರ್ 17 ನೇ ತಾರೀಖಿನಂದು ಗ್ರಾಮದ ಮಂಜುನಾಥ್ ಎಂಬುವವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ, ಕೊರೋನಾ ವಾರಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊರೋನಾ ಪಾಸಿಟಿವ್ ಬಂದಿದ್ದ ವ್ಯಕ್ತಿ, ಸ್ಲ್ಯಾಬ್ ಟೆಸ್ಟ್ ಮಾಡಿದ್ದ ಲ್ಯಾಬ್ ಟೆಕ್ನೀಷಿಯನ್ ಮೇಲೆ ಮಂಜುನಾಥ್ ಹಲ್ಲೆ ನಡಿಸಿದ್ದಾನೆ. ಕೊರೋನಾ ನನಗೆ ಬಂದಿಲ್ಲ, ಹಣವನ್ನು ದೋಚಲು ಕೊರೋನಾ ಪಾಸಿಟಿವ್ ಎಂದು ವರದಿ ಕೊಟ್ಟಿದ್ದೀಯಾ ಎಂದು ಗಂಭೀರವಾಗಿ ಆತನನ್ನು ಥಳಿಸಿದ್ದಾನೆ. ಹಲ್ಲೆ ನಡೆಸಿರು ಕೊರೋನಾ ಸೋಂಕಿತನ ಮೇಲೆ ಕೇಸ್ ದಾಖಲಾಗಿದೆ.
ಇದನ್ನೂ ಓದಿ
https://suddidina.com/daily-news/powertv-and-vijayendra-yeddyurappa/
ಸುದ್ದಿದಿನ.ಕಾಂ|ವಾಟ್ಸಾಪ್|9980346243