ರಾಜಕೀಯ
ನಮ್ಮದು ಜನ ಸ್ನೇಹಿ ಸರ್ಕಾರ : ಡಿ.ಕೆ.ಶಿ
ಸುದ್ದಿದಿನ, ಬೆಂಗಳೂರು : ಯಾವ ಕಂಟಕವಿಲ್ಲದೆ ಅಭಿವೃದ್ದಿ ಕಡೆ ಸರ್ಕಾರ ಕೆಲಸ ಮಾಡ್ತಿದೆ.ಜನಸ್ನೇಹಿ ಯಾಗಿ ಸರ್ಕಾರ ಕೆಲಸ ಮಾಡುತ್ತಿದ್ದರೂ ಮಾಧ್ಯಮದವರಿಗೆ ಸಮಾಧಾನ ಇಲ್ಲ, ಆದರೆ ಜನಕ್ಕೆ ಸಮಾಧನಾ ಇದೆ ಎಂದು ಸರ್ಕಾರಕ್ಕೆ 100 ದಿನ ಪೂರೈಸಿದ ಹಿನ್ನಲೆಯಲ್ಲಿವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಹೇಳಿದರು.
ಎಲ್ಲಾ ವರ್ಗದ ಜನರನ್ನ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಸರ್ಕಾರ ಮಾಡ್ತಿದೆ.ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ಮಾಡುವ ಕೆಲಸ ಈ ಸರ್ಕಾರ ಮಾಡಿದೆ.ಪ್ರಕೃತಿ ವಿಕೋಪ ಪರಿಸ್ಥಿತಿಯಲ್ಲಿ ಸರಿಯಾಗಿ ಸ್ಪಂಧನೆ ಮಾಡಿದ್ದೇವೆ.ಎಲ್ಲಾ ಒಟ್ಟಿಗೆ ಮಾಡದೇ ಇದ್ರು ಸೂಕ್ತ ಕ್ರಮವಹಿಸಲಾಗಿದೆ.ಮುಂದೆಯೂ ಎಲ್ಲಾ ಸೌಲ್ಯಭ ಅ ಜನರಿಗೆ ಕೊಡುತ್ತೇವೆ.ಬೇರೆಯವರ ರೀತಿ ರಾಜಕಾರಣ ನಾವು ಮಾಡೊಲ್ಲ.ಜನರಿಗೆ ಸ್ಪಂಧಿಸೋ ಕೆಲಸ ಮಾಡ್ತೀವಿ ಎಂದು ತಿಳಿಸಿದರು.