ದಿನದ ಸುದ್ದಿ
‘ದೈನಿಕ ಭಾಸ್ಕರ್ ‘ ದಿನ ಪತ್ರಿಕೆ | ಪತ್ರಕರ್ತ ಕಲ್ಪೇಶ್ ಯಾಗ್ನಿಕ್ ಆತ್ಮಹತ್ಯೆ
ಸುದ್ದಿದಿನ ಡೆಸ್ಕ್ | ಮಧ್ಯಪ್ರದೇಶದ ಇಂದೋರ್ನಲ್ಲಿ ದೈನಿಕ ಭಾಸ್ಕರ ಸಮೂಹದ ಸಂಪಾದಕ, ಹಿರಿಯ ಪತ್ರಕರ್ತ ಕಲ್ಪೇಶ್ ಯಾಗ್ನಿಕ್ ಸಹೋದ್ಯೋಗಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 12ರಂದು ತನ್ನ ಪತ್ನಿಯೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಉದ್ಯೋಗದಿಂದ ವಜಾಗೊಂಡಿದ್ದ ಸಲೋನಿ ಹಣ ನೀಡುವಂತೆ ಬ್ಲಾೃಕ್ಮೇಲ್ ಮಾಡಿದ್ದರು ಎಂದು ಐದು ದಿನಗಳ ಹಿಂದೆ ಹಿರಿಯ ಪೊಲೀಸ್ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಅರೋರಾ ತನ್ನ ಬೇಡಿಕೆ ಈಡೇರಿಸದಿದ್ದರೆ ವೃತ್ತಿ ಜೀವನ ಹಾಳು ಮಾಡುವುದಾಗಿ ಮತ್ತು ಆಕೆಯ ಬಳಿ ಇರುವ ಮೊಬೈಲ್ ಸಂಭಾಷಣೆ ಮತ್ತು ವಿಡಿಯೋ ಕ್ಲಿಪ್ಗಳನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿದಿನ.ಕಾಂ| ವಾಟ್ಸಾಪ್|9986715401