ಸಿನಿ ಸುದ್ದಿ

‘ಒಡೆಯ’ನಾಗಿ ಡಿ ಬಾಸ್..!

Published

on

ಸುದ್ದಿದಿನ ಡೆಸ್ಕ್ | ‘ಒಡೆಯ’ ನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಿಂಚಲಿದ್ದಾರೆ. ಈ ‘ಒಡೆಯ’ ಸಿನೆಮಾದ ಮುಹೂರ್ತವು ಮೈಸೂರಿನಲ್ಲಿ ನಿನ್ನೆ ನೆರವೇರಿತು (ಆಗಸ್ಟ್ 16).

ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ ಹಿನ್ನೆಲ, ಅವರ ಮನೆ ಆವರಣದಲ್ಲುಯೇ ಮುಹೂರ್ತವನ್ನು ಅದ್ದೂರಿಯಾಗಿ ಮಾಡಿದರು.

ಕೆಲವು ದಿನಗಳ ಹಿಂದೆ ಟೈಟಲ್ ವಿವಾದದಲ್ಲಿ ಸಿಲುಕಿದ್ದ ಸಿನೆಮಾ ತಂಡ ಟೈಟಲ್ ಕೊಂಚ ಬದಲಿಸಿ ಮುಹೂರ್ತ ಕಾರ್ಯಕ್ರಮಾ ಮಾಡಿದೆ. ಈ ಸಮಾರಂಭದಲ್ಲಿ ದರ್ಶನ್, ಅಂಬರೀಶ್ ಸೇರಿದಂತೆ ಹಲವು ಸಿನೆಮಾ ಹಾಗೂ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version