ದಿನದ ಸುದ್ದಿ
ದಾವಣಗೆರೆ : ಇಂದು ‘ಬೆಳದಿಂಗಳ ಕವಿಗೋಷ್ಠಿ’
ಸುದ್ದಿದಿನ,ದಾವಣಗೆರೆ : ಇಂದು ಸಂಜೆ 5 ಗಂಟೆಗೆ ನಗರದ ಹಿರಿಯ ಕವಯಿತ್ರಿ ಶ್ರೀಮತಿ ಸಂಧ್ಯಾ – ಶ್ರೀ ಸುರೇಶ್ ದಂಪತಿಗಳ ಸ್ವಗೃಹವಾದ ಕೊಂಡಜ್ಜಿ ರಸ್ತೆ ಆರ್ಟಿಓ ಆಫೀಸ್ ಹತ್ತಿರ ದೇವನಗರಿ ಗ್ಯಾಸ್ ಏಜೆನ್ಸಿ ಎದುರಿಗೆ ಅಶೋಕ ನಗರದ ರಸ್ತೆಯ 4ನೇ ಕ್ರಾಸ್ನ ಎಡಬದಿಯ ಮೊದಲ ಮನೆ (ಡೋ.ನಂ : 194/07) ಯಲ್ಲಿ ಕವಿ – ಕಾವ್ಯ – ಸ್ನೇಹ ಸಮ್ಮಿಲನದ ಹಿನ್ನಲೆಯಲ್ಲಿ ಬೆಳದಿಂಗಳ ಕವಿಗೋಷ್ಠಿ ಆಯೋಜಿಸಲಾಗಿದೆ.
ಆಹ್ವಾನಿತ ಕವಿ-ಕವಯಿತ್ರಿಯರು
ಶಿವಯೋಗಿ ಹಿರೇಮಠ್, ಶಿವಕುಮಾರ್ ಕುರ್ಕಿ,ರಾಜಶೇಖರ್ ಗುಂಡಗಟ್ಟಿ, ಓಂಕಾರಮ್ಮ ಆರ್.ಎಸ್, ಮುದ್ದುವೀರಸ್ವಾಮಿ, ಶ್ರೀಮತಿ ಪಂಕಜಾಕ್ಷಿ, ಡಾ.ಆನಂದ್ ಋಗ್ವೇದಿ, ಸುಕನ್ಯಾ ತ್ಯಾವಣಿಗಿ, ರೇವಣ್ಣ ಬಳ್ಳಾರಿ, ಮಲ್ಲಮ್ಮ ನಾಗರಾಜ್, ರತ್ನ ಸಾಲಿಮಠ್,ಶಶಿಕಲಾ ಶಂಕರ್ಮೂರ್ತಿ, ವೀಣಾಕೃಷ್ಣಮೂರ್ತಿ, ಲಲಿತ್ಕುಮಾರ್ ಜೈನ್, ಶಾರದಮ್ಮ ಕಂಪಾಲಿ, ವೀರಭದ್ರಪ್ಪ ತೆಲಗಿ, ಉಮಾ ಮಹಾದೇವ್, ರಾಜೇಂದ್ರ ಪ್ರಸಾದ್ ನೀಲಗುಂದ, ತಾರೇಶ್ ಕೆ.ಪಿ.ಅಣಬೇರು, ಪಾಪುಗುರು,ಸುಭಾಷಿಣಿ ಮಂಜುನಾಥ್, ಗಂಗಾಧರ ಬಿ.ಎಲ್ ನಿಟ್ಟೂರ್, ಸುನೀತಾ ಪ್ರಕಾಶ್, ಮಹಾಂತೇಶ್ ಬಿ ನಿಟ್ಟೂರು ಹಾಗೂ ಉಮಾದೇವಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401