ದಿನದ ಸುದ್ದಿ
ದಾವಣಗೆರೆ | ಪೆಟ್ರೋಲ್-ಡೀಸೇಲ್ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ
ಸುದ್ದಿದಿನ,ದಾವಣಗೆರೆ : ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ಅವೈಜ್ಞಾನಿಕ ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಏರಿಕೆ ವಿರುದ್ದ ಹದಡಿ ರಸ್ತೆಯ ಮಾಗನೂರು ಬಸಪ್ಪ ಬಂಕ್ ಬಳಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ತುರ್ಚಘಟ್ಟದ ಬಸವರಾಜಪ್ಪ, ಹರೀಶ್ ಕೆಂಗಲಹಳ್ಳಿ, ಹದಡಿ ಬ್ಲಾಕ್ ಅಧ್ಯಕ್ಷರು ಹಾಗು ಜಿ.ಪಂ ಸದಸ್ಯರಾದ ನಿಂಗಪ್ಪನವರು,ಬಾತಿ ಶಿವಕುಮಾರ್, ಮಹ್ಮದ್ ಜಿಕ್ರಿಯಾ,ಪ್ರವೀಣ್ ಎಸ್.ಕೆ ,ಬೆಳವನೂರು ಲಿಂಗರಾಜ್ ಹಾಗು ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243