ದಿನದ ಸುದ್ದಿ
ದಾವಣಗೆರೆ | ಇದ್ದೊಬ್ಬ ಮಗನ ಎರಡೂ ಕಿಡ್ನಿ ಫೇಲ್ ; ಧನ ಸಹಾಯಕ್ಕಾಗಿ ಕಣ್ಣೀರಿಟ್ಟ ತಾಯಿ : ದಯವಿಟ್ಟು ಸಹಕರಿಸಿ
ಸುದ್ದಿದಿನ, ದಾವಣಗೆರೆ : ಅವರದ್ದು ಕಡು ಬಡತನದ ಕುಟುಂಬ, ಇಬ್ಬರು ಮಕ್ಕಳಲ್ಲಿ ಒಬ್ಬನನ್ನು ಕಳೆದುಕೊಂಡಿದ್ದ ಆ ತಂದೆ ತಾಯಿ ಇನ್ನೊಬ್ಬ ಮಗನಾದ್ರು ಚೆನ್ನಾಗಿ ಓದಿ ಒಳ್ಳೆಯ ಕೆಲಸ ತಗೋಬೇಕು ಅಂತಾ ಕೂಲಿ ನಾಲಿ ಮಾಡಿ ಅವನನ್ನು ಎಂಎ, ಬಿಎಡ್ ಓದಿಸಿದ್ರು.
ಅವನು ಸಹ ಅತೀ ಹೆಚ್ಚು ಅಂಕ ಪಡೆದು ಸಿಇಟಿಗೆ ಓದುತ್ತಿದ್ದ ಜೊತೆಗೆ ಮನೆಲಿ ಕೂರುವುದು ಬೇಡ, ತಂದೆ ತಾಯಿಗೆ ಆಸರೆಯಾಗೋಣ ಅಂತ ಆತ ಕಾಂಪಿಟೇಟಿವ್ ಪರೀಕ್ಷೆಗೆ ಓದುತ್ತಲೇ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ, ಆದರೆ ದುರಾದೃಷ್ಟ ಆತನ ಎರಡು ಕಿಡ್ನಿ ಫೇಲ್ ಆಗಿದ್ದು, ಇತ್ತ ಇದ್ದ ಒಬ್ಬ ಮಗನನ್ನು ಉಳಿಸಿಕೊಳ್ಳಲು ಆ ತಂದೆ ತಾಯಿ ಕಣ್ಣಿರು ಇಡುತ್ತಿದ್ದಾರೆ.
ಇದನ್ನೂ ಓದಿ | ಸಿಡಿ ಪ್ರಕರಣ | ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿ : ಸಿದ್ದರಾಮಯ್ಯ
ಊಟ ನೀರು ಸೇರದೇ ಹಾಸಿಗೆ ಹಿಡಿದಿರುವ ಯುವಕ, ಮಗನ ಪರಿಸ್ಥಿತಿ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವ ತಂದೆ ತಾಯಿ.. ಈ ಮನಕುಲ ದೃಶ್ಯ ಕಂಡು ಬಂದಿದ್ದು, ದಾವಣಗೆರೆ ತಾಲ್ಲೂಕಿನ ಮಾಳಗೊಂಡನಹಳ್ಳಿಯಲ್ಲಿ, ಹೌದು.. ಮಾಳಗೊಂಡನಹಳ್ಳಿಯ ಪರಶುರಾಮಪ್ಪ ಹಾಗೂ ಅನುಸೂಯಮ್ಮ ದಂಪತಿಯ ಪುತ್ರ 26 ವರ್ಷದ ಕಲ್ಲೇಶ್, ಓದಿನಲ್ಲಿ ತುಸು ಮುಂದು ಈಗಾಗಿಯೇ ಕಲ್ಲೇಶನನ್ನು ಹೇಗಾದರು ಮಾಡಿ ಓದಿಸಬೇಕು ಎಂದು ಕೂಲಿ ಮಾಡಿ ಹಣ ಕೂಡಿಟ್ಟು ಬಿಎಡ್, ಎಂಎ ಓದಿಸಿದ್ರು.
ಕಲ್ಲೇಶ್ ಓದಿನಲ್ಲಿಮುಂದೆ ಇದ್ದ ಕಾರಣ ಉತ್ತಮ ಅಂಕ ಪಡೆದಿದ್ದ, ಬಳಿಕ ಮನೆಯ ಪರಿಸ್ಥಿತಿ ಸರಿ ಇಲ್ಲದ ಹಿನ್ನಲೆ ಕಲ್ಲೇಶ್ ಸಿಇಟಿ, ಕಾಂಪಿಟೇಟಿವ್ ಪರೀಕ್ಷೆಗೆ ಓದುತ್ತಲೇ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಾ ಮನೆಗೆ ಆಸರೆಯಾಗಿದ್ದ, ಆದರೆ ಅದೊಂದು ದಿನ ಹೊಟ್ಟೆ ತಳ ಭಾಗ ನೋವ್ವ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ತೋರಿಸಿದಾಗ ಕುಟುಂಬಕ್ಕೆ ಬರಸಿಡಿಲು ಸುದ್ದಿ ಬಡಿದಿತ್ತು, ಅದುವೇ ಕಲ್ಲೇಶನಿಗೆ ಎರಡು ಕಿಡ್ನಿ ಫೇಲ್ ಎಂದು ವೈದ್ಯರು ಶಾಕಿಂಗ್ ನ್ಯೂಸ್ ಕೊಟ್ಟಿದ್ರು.
ಇನ್ನು ಕಲ್ಲೇಶ್, ಯಾವೂದೇ ಕುಡಿತ, ಗುಟ್ಕ ಮುಟ್ಟಿದವನಲ್ಲ, ಚಿಕ್ಕವನಿದಾಗ ಕಿಡ್ನಿಯಲ್ಲಿ ಕಲ್ಲು ಇತ್ತಂತೆ ಇದನ್ನ ಟ್ರಿಟ್ ಮೆಂಟ್ ಮೂಲಕವೇ ಕರಗಿಸುತ್ತೇವೆ ಎಂದು ವೈದ್ಯರು ಚಿಕಿತ್ಸೆ ನೀಡಿದ್ದರಂತೆ, ಅದಾದ ಬಳಿಕ ಹುಷಾರಾಯಿತು ಅಂತ ಸುಮ್ಮನಿದ್ದ ಕಲ್ಲೇಶ್ ಗೆ ಹಲವು ವರ್ಷಗಳ ಬಳಿಕ ಈಗ ಕಿಡ್ನಿ ಫೇಲ್ ಆಗಿರುವ ಸಂಗತಿ ತಿಳಿದಿದೆ, ಇನ್ನೂ ಇಬ್ಬರು ಮಕ್ಕಳಲ್ಲಿ ಒಬ್ಬ ಜಾಂಡಿಸ್ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಾನೆ.
ಈಗ ಇರುವುದು ಇವನೊಬ್ಬ, ಇವನಿಗೂ ಇದೇ ಪರಿಸ್ಥಿತಿ ಬಂದಿದೆ.. ನನ್ನ ಕಿಡ್ನಿ ಇವನಿಗೆ ಹೊಂದುತ್ತಂತೆ, ಆದರೆ ಬದಲಾಯಿಸಲು ೧೫ ರಿಂದ ೨೦ ಲಕ್ಷ ರೂಪಾಯಿ ಖರ್ಚಾಗುತ್ತೆ ಅಂತಾ ಡಾಕ್ಟರ್ ತಿಳಿಸಿದ್ದಾರೆ, ಇದ್ದ ಬದ್ದ ಹಣವನ್ನೆಲ್ಲ ಡಯಾಲಿಸಿಸ್ ಮಾಡಿಸಲು ಆಸ್ಪತ್ರೆಗೆ ಖರ್ಚಾಗಿದೆ, ಯಾರಾದ್ರು ಸಹಾಯ ಮಾಡಿ ಮಗನ ಉಳಿಸಿಕೊಡಿ ಅಂತಾ ತಾಯಿ ಅನುಸೂಯಮ್ಮ ಕಣ್ಣೀರಿಟ್ಟಿದ್ದಾರೆ.
ಒಟ್ಟಾರೆ ಇದ್ದ ಒಬ್ಬ ಮಗನನ್ನು ಉಳಿಸಿಕೊಳ್ಳಲು ಬಡ ದಂಪತಿಗಳು ಹರಸಾಹಸ ಪಡ್ತಾ ಇದ್ದಾರೆ, ಕಿಡ್ನಿ ಕೊಡಲು ರೆಡಿ ಇದ್ದರು ಬದಲಾಯಿಸಲು ಹಣವಿಲ್ಲ,,ಹೀಗಾಗಿ ಇವರಿಗೆ ಸಹಾಯ ಮಾಡುವವರು ಅಕೌಂಟ್ ನಂಬರ್ ಕೆಳಗಿನಂತೆ
NAME- KALLLESH. P
ACOUNT NOMBR-34869949662
IFSC- SBIN0005624
BRANCH CODE- 5624
G pay-phone pay
Mob: 9845601182 ಗೂ ಧನ ಸಹಾಯ ಮಾಡಬಹುದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243