ರಾಜಕೀಯ
ದಾವಣಗೆರೆ ಮಹಾನಗರ ಪಾಲಿಕೆ ಉಪಚುನಾವಣೆ : ಬಿಜೆಪಿಯ ಶ್ರೀನಿವಾಸ್ , ಶ್ವೇತಾ ಶ್ರೀನಿವಾಸ್ ದಂಪತಿಗಳಿಗೆ ಭಾರೀ ಗೆಲುವು
ಸುದ್ದಿದಿನ,ದಾವಣಗೆರೆ : ಮಹಾನಗರ ಪಾಲಿಕೆ ವಾರ್ಡ್ ನಂ 28 ಮತ್ತು 37ರ ಉಪ ಚುನಾವಣೆ ಮತ ಎಣಿಕೆ ಕಾರ್ಯವು ಮುಕ್ತಾಯಗೊಂಡಿದ್ದು ,ಬಿಜೆಪಿ ಆಪರೇಷನ್ ಕಮಲ ನಡೆಸಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಶ್ರೀನಿವಾಸ್ ಮತ್ತು ಲತಾ ಶ್ರೀನಿವಾಸನ್ ದಂಪತಿಗಳಿಬ್ಬರೂ ಭಾರೀ ಬಹುಮತಗಳಿಂದ ವಿಜೇತರಾಗಿದ್ದಾರೆ.
ದಾವಣಗೆರೆ ಮಹಾನಗರಪಾಲಿಕೆ 28ನೇ ವಾರ್ಡ್ ನ ಫಲಿತಾಂಶ
- ಬಿಜೆಪಿ ಜೆ.ಎನ್.ಶ್ರೀನಿವಾಸ್ : 2565
- ಕಾಂಗ್ರೆಸ್ ಗಣೇಶ್ ಹುಲುಮನೆ : 1884
- ಕೆ.ಆರ್.ಎಸ್ ಅಭಿಷೇಕ್ : 86
- ನೂತನ ಪ್ರಜಾಕೀಯ ಚಂದ್ರಶೇಖರ್ : 60
- ಜೆಡಿಎಸ್ ಮಹಮದ್ ಸಮೀವುಲ್ಲಾ : 16
- ನೋಟಾ : 12
ಬಿಜೆಪಿ ಅಭ್ಯರ್ಥಿ 681 ಮತಗಳ ಅಂತರದಿಂದ ಶ್ರೀನಿವಾಸ್ ಜಯಗಳಿಸಿದ್ದಾರೆ.
ದಾವಣಗೆರೆ ಮಹಾನಗರಪಾಲಿಕೆ 37ನೇ ವಾರ್ಡ್ ನ ಫಲಿತಾಂಶ
- ಬಿಜೆಪಿ ಶ್ವೇತಾ ಶ್ರೀನಿವಾಸ್ : 2096
- ಕಾಂಗ್ರೆಸ್ ರೇಖಾರಾಣಿ : 1303
- ನೋಟಾ : 24
ಬಿಜೆಪಿ ಅಭ್ಯರ್ಥಿ 793 ಮತಗಳ ಅಂತರದಿಂದ ಲತಾ ಶ್ರೀನಿವಾಸ್ ಜಯಗಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243