ದಿನದ ಸುದ್ದಿ
ನಿಸ್ವಾರ್ಥವೇ ದೊಡ್ಡತನದ ಸಂಕೇತ : ಪ್ರತಿಭಾ ದೊಗ್ಗಳ್ಳಿ
ಸುದ್ದಿದಿನ,ದಾವಣಗೆರೆ : ಸಾಮಾನ್ಯ ಜ್ಞಾನ, ಚಿಕ್ಕ – ಚಿಕ್ಕ ವಿಷಯಗಳ ಬಗ್ಗೆ ಕೇಂದ್ರಿಕರಿಸುವ ಗಮನ, ನಿಸ್ವಾರ್ಥವಾಗಿ ಮಾಡುವ ಒಂದು ಸಣ್ಣ ಸೇವೆಯೂ ಸಹ ದೊಡ್ಡತನದ ಸಂಕೇತವಾಗಿದೆ. ಇಂತಹ ಗುಣಗಳನ್ನು ಮಕ್ಕಳು ಬಾಲ್ಯದಲ್ಲೇ ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ಜೆ.ಹೆಚ್.ಪಟೇಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಪಿ ದೊಗ್ಗಳ್ಳಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲ್ಲೂಕಿನ ಗೋಪನಾಳು ಗ್ರಾಮದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ವಸತಿ ಶಾಲೆಯಲ್ಲಿ 2018 – 19ನೇ ಸಾಲಿನ ವಿಶೇಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಓದು – ಬರೆಹದ ಜೊತೆ ಸಾಮಾನ್ಯ ತಿಳಿವಳಿಕೆ ಹಾಗೂ ಇತರರಿಗೆ ನಿಸ್ವಾರ್ಥವಾಗಿ ಸಹಾಯ ಮಾಡುವ ಸ್ವಭಾವ ಉಳ್ಳವರನ್ನು ಸಮಾಜ ದೊಡ್ಡ ವ್ಯಕ್ತಿಗಳನ್ನಾಗಿ ಗುರುತಿಸುತ್ತದೆ ಎಂದರು.
ಮಹಾತ್ಮ ಗಾಂಧೀಜಿ, ಸ್ವಾಮೀ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್ರಂತೆ ತಾವು ಕೂಡ ದೊಡ್ಡ ವ್ಯಕ್ತಿಗಳಾಗಿ ಇತಿಹಾಸ ಪುಟದಲ್ಲಿ ಅಮರರಾಗಬೇಕೆಂದರೆ ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ ಎಂದು ನುಡಿದರು.ನಂತರ ಪ್ರತಿಭಾ ದೊಗ್ಗಳ್ಳಿ ಅವರು, ಸದರಿ ವಸತಿ ಶಾಲೆಯ 2018-19ನೇ ಸಾಲಿನ ಸಾಧಕ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜಿನ ವತಿಯಿಂದ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ- ಪ್ರೋತ್ಸಾಹಿಸಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ವಸತಿ ಶಾಲೆಯ ಪ್ರಾಚಾರ್ಯರಾದ ವಿ.ಸಿ ಅಂಜಿನಪ್ಪ ಮಾತನಾಡಿ, ನಮ್ಮ ಶಾಲೆಯ ಆರ್ಥಿಕವಾಗಿ ಹಿಂದುಳಿದ ಬಡ ಪ್ರತಿಭಾವಂತ ಮಕ್ಕಳ ವಿಶೇಷ ಪ್ರತಿಭೆಯನ್ನು ಗುರುತಿಸಿ, ದಾವಣಗೆರೆಯಿಂದ ಆಗಮಿಸಿ ವಿಶೇಷ ಪುರಸ್ಕಾರ ನೀಡಿದ ಕಾರ್ಯ ಶ್ಲಾಘನೀಯ. ಇದು ಜೆ.ಹೆಚ್ ಪಟೇಲ್ ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿ ಪುಟ್ಟರಾಜು ಮತ್ತು ಅವರ ಶ್ರೀಮತಿಯವರಾದ ಪ್ರತಿಭಾ ದೊಗ್ಗಳ್ಳಿಯವರ ಸಹೃದಯತೆ ಹಾಗೂ ಸಾಮಾಜಿಕ ಕಳಕಳಿಗೆ ಸಾಕ್ಷಿ ಎಂದು ಕೃತಜ್ಞತೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಆದರ್ಶ ವಿದ್ಯಾರ್ಥಿಗಳಾದ 6ನೇ ತರಗತಿಯ ಕು||ಜಯಮ್ಮ ಜಿ.ಎಂ ಮತ್ತು ಕು|| ಗಗನ, 7ನೇ ತರಗತಿಯ ಕು|| ರೇವಣಸಿದ್ದೇಶ್ ಎ.ಪಿ ಮತ್ತು ಕು|| ರಕ್ಷಿತಾ ಎಂ.ಹೆಚ್., ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಾದ 7ನೇ ತರಗತಿಯ ಕು|| ರೇವತಿ.ಎಸ್.ಎನ್ ಹಾಗೂ 6ನೇ ತರಗತಿಯ ಕು|| ರಘು ಎನ್, ವರ್ಷದ ಸಾಂಸ್ಕøತಿಕ ವಿದ್ಯಾರ್ಥಿಯಾದ 7ನೇ ತರಗತಿಯ ಕು|| ಮಾರುತಿ ಹೆಚ್.ಟಿ., ವರ್ಷದ ಕ್ರೀಡಾ ವಿದ್ಯಾರ್ಥಿ 7ನೇ ತರಗತಿಯ ಆದರ್ಶ ಡಿ.ಕೆ., ವರ್ಷದ ಉತ್ತಮ ಯೋಗಪಟುವಾದ 7ನೇ ತರಗತಿ ಕು|| ಸೃಷ್ಟಿ ಕೆ.ಆರ್ ಹಾಗೂ ವರ್ಷದ ವಿಶೇಷ ವಿದ್ಯಾರ್ಥಿಯಾದ
7ನೇ ತರಗತಿ ಕು|| ಡಿ.ಮಂಜುನಾಥ್ ಅವರುಗಳಿಗೆ ಪುರಸ್ಕರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401