ದಿನದ ಸುದ್ದಿ

ದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’

Published

on

ಸುದ್ದಿದಿನ,ದಾವಣಗೆರೆ:ಕನ್ನಡ, ತೆಲುಗು, ಉರ್ದು ಸೇರಿದಂತೆ ಭಾರತೀಯ ಭಾಷೆಗಳ ಭಾಷಾಂತರ ಕೌಶಲ್ಯ ತರಬೇತಿ ಶಿಬಿರವನ್ನು ದಾವಣಗೆರೆಯ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಹಾಗೂ ಭಾರತೀಯ ಭಾಷಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜೂನ್ 2 ರಿಂದ 4 ರವರೆಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಪ್ರೊ. ಪಕ್ಕೀರೇಶ ಹಳ್ಳಳ್ಳಿ ತಿಳಿಸಿದ್ದಾರೆ.‌

ಪ್ರಕಟಣೆಯಲ್ಲಿ ತಿಳಿಸಿರುವ ಅವರು “ಭಾರತೀಯ ಭಾಷಾ ಕೇಂದ್ರ ಸಂಸ್ಥೆಯ ‘ರಾಷ್ಟ್ರೀಯ ಅನುವಾದ ಮಿಷನ್’ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ 2026, ಜೂನ್ 2 ರಿಂದ 4 ರವರೆಗೆ ಮೂರು ದಿನಗಳ ಅನುವಾದ ಅಥವಾ ಭಾಷಾಂತರ ಶಿಖರವನ್ನು ಆಯೋಜಿಸಲಾಗಿದ್ದು ಶಿಬಿರದಲ್ಲಿ ಕನ್ನಡ, ತೆಲುಗು, ಉರ್ದು ಭಾಷೆಗಳ ಭಾಷಾಂತರ ಬಗ್ಗೆ ಶಿಬಿರವನ್ನು ಆಯೋಜಿಸಲಾಗಿದ್ದು. ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

“ದಾವಣಗೆರೆ ಎವಿಕೆ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಡಾ. ಅನುರಾಧ ಪಿ ಎಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಡಾ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರಿನ ರಾಷ್ಟ್ರೀಯ ಅನುವಾದ ಮಿಷನ್ ನ ಹಿರಿಯ ಕರೆಸ್ಪಾಂಡೆಂಟ್ ಪ್ರೊ. ಉಷಾರಾಣಿ ಆರ್ ಶಿಬಿರದ ಬಗ್ಗೆ ಮಾತನಾಡಲಿದ್ದಾರೆ”

“ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿವಿ ರಿಜಿಸ್ಟ್ರಾರ್ ಎಸ್ ಬಿ ಘಂಟಿ, ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ. ಸಿ ಕೆ ರಮೇಶ್, ಹಣಕಾಸು ಅಧಿಕಾರಿ ಪ್ರೊ. ಆರ್ ಶಶಿಧರ, ಕಲಾ ವಿಭಾಗದ ಡೀನ್ ಪ್ರೊ. ಲೋಕೇಶ್ ಎಂ ಯು, ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರೊ. ಪಕ್ಕೀರೇಶ ಹಳ್ಳಳ್ಳಿ , ಪ್ರೊ.ರವಿಕುಮಾರ್ ಕುಂಬಾರ್, ಪ್ರೊ. ಮದಕರಿನಾಯಕ ಎಚ್ ಆರ್, ಪ್ರೊ. ಯಜ್ಞಶ್ರೀ ಎಸ್ ಹಾಗೂ ಇಂಗ್ಲಿಷ್ ಅಧ್ಯಯನ ವಿಭಾಗ ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ” ಎಂದು ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರೊ. ಪಕ್ಕೀರೇಶ ಹಳ್ಳಳ್ಳಿ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version