ದಿನದ ಸುದ್ದಿ
ದೇವೇಗೌಡರು ಪ್ರಧಾನಿಯಾಗಿ ದೆಹಲಿಗೆ ಬಂದರೂ ಹಾಸನ ಮರೆಯಲಿಲ್ಲ : ವೆಂಕಯ್ಯ ನಾಯ್ಡು
ಸುದ್ದಿದಿನ ಡೆಸ್ಕ್ : ಯಾರೋಬ್ಬರೂ ತಮ್ಮ ಮಾತೃಭೂಮಿಯನ್ನು ಮರೆಯಬಾರದು.ತಾವು ಹುಟ್ಟಿಬೆಳೆದ ಸ್ಥಳವನ್ನು ಬಿಡಬಾರದು.ಮಾಜಿ ಪ್ರಧಾನಿ ದೇವೇಗೌಡ ಅವರನ್ನೇ ನೋಡಿ.ಅವರು ಪ್ರಧಾನಿಯಾಗಿ ದೆಹಲಿಗೆ ಬಂದರೂ ಹಾಸನವನ್ನು ಮಾತ್ರ ಬಿಡಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಉದಾಹರಿಸಿ ಭಾಷಣ ಮಾಡಿದರು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು.
ಮಾತೃಭಾಷೆ ಕಣ್ಣು ಇದ್ದಂತೆ. ಇತರ ಭಾಷೆ ಕನ್ನಡಕದಂತೆ.
ಕನ್ನಡಕಕ್ಕಿಂತಲೂ ಕಣ್ಣು ಮುಖ್ಯ.ಹಾಗಾಗಿಯೇ ಸ್ಥಳಿಯ ಭಾಷೆಗಳನ್ನು ಉತ್ತೇಜಿಸಬೇಕು.ಇಂದಿನ ಪರಿಸ್ಥಿತಿಯಲ್ಲಿ ಎಲ್ಲಾ ಮಠ ಮಾನ್ಯಗಳು ಕೂಡ ಸಮಾಜಿಕವಾಗಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂದು ಸುತ್ತೂರು ಕ್ಷೇತ್ರದಲ್ಲಿ ಕರೆ ನೀಡಿದರು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು.
ಸುದ್ದಿದಿನ.ಕಾಂ|ವಾಟ್ಸಾಪ್|9986715401