ದಿನದ ಸುದ್ದಿ

RSS ನ ಸಿದ್ಧಾಂಗಳೇ ಬಾಂಬ್ ಬ್ಲಾಸ್ಟ್ ಗೆ ಕಾರಣ : ದಿಗ್ವಿಜಯ್ ಸಿಂಗ್

Published

on

ಸುದ್ದಿದಿನ ಡೆಸ್ಕ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತಗಳ ಪ್ರೇರಣೆಯೇಯಿಂದಲೇ ಹಲವು ಬಾಂಬ್ ಬ್ಲಾಸ್ಟ್ ಗಳನ್ನು ನಡೆಸಲು ಕಾರಣ. ಅದು ಮಲೇಗಾಂವ್ ಸ್ಪೋಟವಿರಬಹುದು, ಮೆಕ್ಕಾ ಮಸೀದಿಯ‌ ಸ್ಪೋಟ ಅಥವಾ ಸಂಜೋತಾದ ಘಟನೆಯೇ ಇರಬಹುದು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ನಾನು‌ ಹಿಂದೂ ಭಯೋತ್ಪಾದನೆ ಎಂಬುವ ಪದವನ್ನು ಪ್ರಯೋಗ ಮಾಡಿದ್ದೇನೆ ಎಂಬ ತಪ್ಪು ಮಾಹಿತಿ ನಿಮ್ಮಲ್ಲಿ್ದದೆ. ಆದರೆ ನಾನು ಯಾವಾಗಲೂ ಹೇಳುವುದು ‘ಸಂಘಿ ಭಯೋತ್ಪಾದನೆ’ ಎಂಬ ಪದವನ್ನಷ್ಟೇ ಪ್ರಯೋಗ ಮಾಡಿದ್ದೇನೆ’, ಎಂದು ಮಧ್ಯಪ್ರದೇಶದ ಭೂಪಾಲ್ ನಲ್ಲಿ ದಿಗ್ವಿಜಯ್ ಸಿಂಗ್ ಪತ್ರಕರ್ತರಿಗೆ ಸ್ಷಷ್ಟೀಕರಣಗೊಳಿಸಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸಂಜಯ್ ಫಾಠಕ್ ಅವರು ” ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆ ಕೆಲವರ ಧಾರ್ಮಿಕ ಭಾವನೆಗಳಿಗೆ ನೋವುಟುಮಾಡಿದೆ. ಯಾವಧರ್ಮವೂ ಹಿಂಸೆಯನ್ನು ಹಾಗೂ ಭಯೋತ್ಪಾದನೆಯನ್ನು ಪ್ರಚೋದಿಸುವುದಿಲ್ಲ. ಹಾಗಾಗಿ ಭಾರತದಲ್ಲಿ ವಾಸಿಸುವವರೆಲ್ಲರನ್ನು ಹಿಂದುಗಳೆಂದೇ ಕರೆಯಬೇಕು. ಆದರೆ ಅದೇ ಹಿಂಸೆಗೆ ಪ್ರಚೋದನೆಯನ್ನು ನೀಡುತ್ತದೆ ಎಂಬುದು ತಪ್ಪು”. ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version