ಬಹಿರಂಗ
ಖುಷಿ ಇದೆ ನಂಗೆ, ನಾನು ಇಂಥ ದೇಶ’ಭಕ್ತ’ ನಲ್ಲ : ಡಾ. ಬಿ.ಆರ್.ಅಂಬೇಡ್ಕರ್
ಇಂಡಿಯಾ ಒಂದು ವಿಶಿಷ್ಟ ದೇಶ. ಇಲ್ಲಿಯ ರಾಷ್ಟ್ರೀಯವಾದಿ, ದೇಶಭಕ್ತರೂ ಒಂದು ನಮೂನಿ ಜೀವಿಗಳೇ ಸರಿ. ಈ ದೇಶದ ಒಬ್ಬ ರಾಷ್ಟ್ರೀಯವಾದಿ ಹಾಗೂ ದೇಶಭಕ್ತ ಇಲ್ಲಿ ತನ್ನಂತೆಯೇ ಇರುವ ಜನರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದನ್ನು ಬಿಟ್ಟ ಕಣ್ಣುಗಳಿಂದ ನೋಡಬಲ್ಲ. ಆದರೆ, ಹಾಗೆ ಮಾಡುವುದು ತಪ್ಪು ಎಂದು ಅವನೊಳಗಿನ ಮಾನವೀಯತೆ ಪ್ರತಿಭಟಿಸುವುದೇ ಇಲ್ಲ.
ಅವನಿಗೆ ಗೊತ್ತು ಈ ನೆಲದಲ್ಲಿ ವಿನಾಕಾರಣ ಹಲವರಿಗೆ, ಮುಖ್ಯವಾಗಿ ಮಹಿಳೆಯರಿಗೆ ಹಕ್ಕುಗಳನ್ನು ನಿರಾಕರಿಸಲಾಗಿದೆ. ಆದರೆ, ಈ ಬಗ್ಗೆ ಏನಾದರೂ ಮಾಡಬೇಕೆಂದು ಆತನ ನಾಗರಿಕ ಪ್ರಜ್ಞೆಗೆ ಅನ್ನಿಸುವುದೇ ಇಲ್ಲ. ಸಾರ್ವಜನಿಕ ಉದ್ಯೋಗ ಅವಕಾಶಗಳಿಂದ ಒಂದು ವರ್ಗ ಸಂಪೂರ್ಣವಾಗಿ ಹೊರಗುಳಿದಿದೆ ಎಂದು ಅವನಿಗೆ ಗೊತ್ತು. ಆದರೆ ಆ ಕಟು ವಾಸ್ತವ, ಆತನಲ್ಲಿನ ನ್ಯಾಯಪರ ಪ್ರಜ್ಞೆಯನ್ನು ಎಚ್ಚರಿಸುವುದಿಲ್ಲ.
ವ್ಯಕ್ತಿ ಹಾಗೂ ಸಮಾಜಕ್ಕೆ ನೋವುಂಟು ಮಾಡಬಲ್ಲ ನೂರಾರು ಪದ್ಧತಿಗಳಲ್ಲಿ ಈ ದೇಶಭಕ್ತ ಅನುಸರಿಸುತ್ತಾನೆ. ಅಂತಹ ಆಚರಣೆಗಳು ಅವನಲ್ಲಿ ಅಸಹ್ಯ ಹುಟ್ಟಿಸುವುದೇ ಇಲ್ಲ. ಹಾಗೂ ಅವನ ಏಕೈಕ ಒತ್ತಾಯ ಅಧಿಕಾರ – ತನಗೆ ಹಾಗೂ ತನ್ನವರಿಗೆ.
ನನಗೆ ಖುಷಿ ಇದೆ, ಅಂತಹ ದೇಶಭಕ್ತರ ಪೈಕಿ ನಾನಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದ ಮೇಲೆ ತನ್ನ ನಿಲುವು ತಾಳುವ ಹಾಗೂ ಎಲ್ಲಾ ತೆರನ ಏಕಾಧಿಪತ್ಯವನ್ನು ನಿರ್ನಾಮ ಮಾಡಲು ಬಯಸುವ ವರ್ಗಕ್ಕೆ ಸೇರಿದವನು ನಾನು. ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲರೂ ಸಮಾನರು ಎಂಬ ಆದರ್ಶವನ್ನು ಜಾರಿಗೆ ತರುವುದೇ ನಮ್ಮ ಗುರಿ.
– ಡಾ. ಬಿ.ಆರ್. ಅಂಬೇಡ್ಕರ್
(ಕನ್ನಡಕ್ಕೆ Sathish GT)
ಸುದ್ದಿದಿನ.ಕಾಂ|ವಾಟ್ಸಾಪ್|9980346243