ರಾಜಕೀಯ
ಬ್ರೇಕಿಂಗ್: ನಾನು ಸಿಎಂ ಆಗಬಾರದೆಂದು ವಿರೋಧಿ ಶಕ್ತಿಗಳು ಒಂದಾಗಿವೆ: ಸಿದ್ದು ಮನದಾಳ
ಸುದ್ದಿದಿನ ಡೆಸ್ಕ್: ನಾನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ವಿರೋಧಿ ಶಕ್ತಿಗಳು ಒಂದಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿನ ರಾಜಕೀಯ ಹಣ ಹಾಗೂ ಜಾತಿ ಮೇಲೆ ನಿಂತಿದೆ. ಕಳೆದ ಐದು ವರ್ಷ ಅವಧಿಯಲ್ಲಿ ನಮ್ಮ ಸರ್ಕಾರ ಎಲ್ಲ ಜಾತಿಯ ಬಡವರಿಗೆ ಹಾಲು, ಅಕ್ಕಿ ಸೇರಿ ಹಲವು ನೆರವು ನೀಡಿತ್ತು. ಒಂದೇ ಜಾತಿಗೆ ಸೌಲಭ್ಯ ನೀಡಿದ್ದೇವೆಯೇ ? ನಾನು ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂದುಕೊಂಡಿದ್ದೆ. ಆದರೆ ಚಕ್ರ ಉರುಳಿದಾಗ ಮೇಲಿದ್ದವರು ಕೆಳಗೆ, ಕೆಳಗಿದ್ದವರು ಮೇಲೆ ಬರಲೇಬೇಕು ಎಂದು ತಮ್ಮ ನೋವು ತೋಡಿಕೊಂಡರು.