ದಿನದ ಸುದ್ದಿ
ಮಾಯಕೊಂಡ | ಈಜಲು ಹೋದ ತಂದೆ-ಮಗ ಸಾವು
ಸುದ್ದಿದಿನ,ದಾವಣಗೆರೆ: ಕ್ವಾರೆಯಲ್ಲಿ ಈಜಲು ಹೋಗಿದ್ದ ತಂದೆ ಮಗ ಸಾವನಪ್ಪಿದ ಘಟನೆ ದಾವಣಗೆರೆ ತಾಲೂಕು ಶಂಕರನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ತಂದೆ ಕಿರಣ್ ಕುಮಾರ್( 45 ವರ್ಷ) ಮಗ ಸೃಜನ್ (14 ವರ್ಷ) ಈಜಲು ಹೋಗಿದ್ದರು. ಆದರೆ ಕ್ವಾರೆಯಲ್ಲಿಈಜಲು ಬಾರದೆ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಯಕೊಂಡ ಪೊಲೀಸರು ಭೇಟಿ ನೀಡಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಮೃತ ಶವ ಮೇಲೆತ್ತಿದ್ದಾರೆ. ಮಾಯಕೊಂಡ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243