ರಾಜಕೀಯ

ಮೈತ್ರಿ’ ನಾಯಕರ ವಾಕ್ಸಮರ ಇಂದಿನಿಂದ ನಿಲ್ಲುತ್ತೆ : ಜಿ.ಟಿ. ದೇವೇಗೌಡ

Published

on

ಸುದ್ದಿದಿನ,ಮಂಡ್ಯ : ನನ್ನ ಶ್ರೀಮತಿಯವರ ಅಪೇಕ್ಷೇ ಮೇರೆಗೆ ಈ ದೇವಸ್ಥಾನಕ್ಕೆ ಬಂದಿದ್ದೇನೆ. ಭಾರೀ ಸಂತೋಷ ಆಯ್ತು ಅರ್ಚಕರು 101 ಕಳಸದ ಅಭಿಷೇಕವನ್ನು ಪುರೋಹಿತರು ಬಹಳ ಭಕ್ತಿ ಪೂರ್ವಕವಾಗಿ ಮಾಡಿದ್ದಾರೆ ಎಂದು ಶ್ರೀರಂಗಪಟ್ಟಣದ ಗಂಜಾಮ್ ನಲ್ಲಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಈ ನಾಡಿಗೆ ಮಳೆ ಬೆಳೆ ಸೌಖ್ಯ ತರಬೇಕು, ಎಲ್ರಿಗೂ ಅರೋಗ್ಯಕೊಟ್ಟು ಕಾಪಾಡಲಿ. ಎಲ್ರೂ ಪ್ರೀತಿ ಶಾಂತಿ ಸಹಬಾಳ್ವೆಯಿಂದ ಬಾಳಲು ತಾಯಿ ಆಶೀರ್ವಾದ ಎಲ್ರೀಗೂ ಇರಲಿ ಎಂದರು.

ಮೇ 23 ರ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಎಲ್ರೂ ದೇಶದ ಫಲಿತಾಂಶ ಏನಾಗುತ್ತೆ ಅಂತಾ ಮೇ23 ನ್ನೆ ಕಾಯ್ತಾ ಇದ್ದಾರೆ ದೇಶದಲ್ಲಿ ಏನಾಗುತ್ತೆ ಅಂತಾ, ಆದ್ರೆ ರಾಜ್ಯದಲ್ಲಿ ಈ ಫಲಿತಾಂಶದಿಂದ ಏನೂ ಆಗಲ್ಲ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹೋಗುತ್ತೆ ಅಂತಿದ್ರು.ಆದ್ರೆ ಅದೆಲ್ಲಾ ಸುಳ್ಳಾಗಿದೆ, ಈಗ್ಲೂ ಅಂತಿದ್ದಾರೆ ಅದೆಲ್ಲಾ ಸುಳ್ಳಾಗುತ್ತೆ ಎಂದು ನುಡಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನು ನಾಲ್ಕು ವರ್ಷದ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡ್ತಾರೆ. ಮೈತ್ರಿ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಡಿಸಿಎಂ ಆಗಿ ಪರಮೇಶ್ವರ್ ಮಂತ್ರಿಮಂಡಲ ಇರುತ್ತೆ ಎಂದು ಆಶಾ ಭಾವನೆ ವ್ಯಕ್ತ ಪಡಿಸಿದರು.

ತದನಂತರ ಮಂಡ್ಯದಲ್ಲಿ ಮೈತ್ರಿನಾಯಕರ ವಾಕ್ಸಮರ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಎಲ್ಲವು ಮುಗಿದು ಹೋಗಿವೆ ಅದೆಲ್ಲಾ ಮುಗಿದ ವಿಚಾರ.ಮೇ-,23 ರವರ ಫಲಿತಾಂಶದವರೆಗೂ ಕಾಯಿರಿ ಯಾರು ಪ್ರಧಾನಿಯಾಗ್ತಾರೆ ಅನ್ನೋದು ಗೊತ್ತಾಗುತ್ತೆ.ರಾಜ್ಯದಲ್ಲಿ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ಮೈತ್ರಿ ನಾಯಕರ ವಾಕ್ಸಮರ ಇಂದಿನಿಂದ ನಿಲ್ಲುತ್ತೆ. ಅವರೆಲ್ಲರಿಗೂ ಜ್ಞಾನೋದಯವಾಗಿದೆ ಅವರ್ಯಾರು ಮಾತನಾಡಲ್ಲ ಎಂದರು.

ಎಲ್ಲಾ ಹಿರಿಯುರು ಈಗಾಗಲೇ ಕುಳಿತು ಮಾತನಾಡಿದ್ದಾರೆ. ನಾವೆಲ್ಲರು ಒಗ್ಗಾಟ್ಟಾಗಿದ್ದು ಒಂದೆ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶವಿದ್ದು. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡುವ ಹೋಗುವ ಮತನಾಡಿದ್ದಾರೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version