ಲೈಫ್ ಸ್ಟೈಲ್

ಗಣೇಶನಿಗೆ ಲಂಬೋದರನೆಂದು ಏಕೆ ಕರೆಯುತ್ತಾರೆ ಗೊತ್ತಾ ?

Published

on

ಸುದ್ದಿದಿನ ವಿಶೇಷ: ವಿಜ್ಞ ವಿನಾಶಕ ಗಣಪತಿ ಹಿಂದುಗಳಿಗೆ ವಿಶೇಷ ದೇವರು. ಬಿಂದುಗಳಲ್ಲಿ ಬಹುತೇಕ ಎಲ್ಲ ಸಮುದಾಯದವರು ವಿವಿಧ ರೂಪ ಹಾಗೂ ಕಾಲದಲ್ಲಿ ಗಣೇಶ ಆರಾಧನೆ ಮಾಡುವುದುಂಟು.

ಇನ್ನು ಗಣೇಶ ಚತುರ್ಥಿ ವಿಶೇಷ ಆರಾಧನೆ ನಡೆಯುತ್ತವೆ. ಗಣೇಶನ ಕುರಿತು ಹಲವು ಕುತೂಹಲ ಕೆರಳಿಸುವ ಕತೆ ಹಾಗೂ ವಿಷಯಗಳಿವೆ. ಗಣೇಶನಿಗೆ ಲಂಬೋದರ ಎಂದು ಏಕೆ ಕರೆಯಲಾಗುತ್ತದೆ ಎಂಬ ಕುತೂಹಲ ಸಹಜವಾಗಿರುತ್ತದೆ.

ಲಂಬ+ಉದರ ಶಬ್ದಗಳ ಮಿಶ್ರಣದಿಂದ ಲಂಬೋದರ ನಿರ್ಮಿತವಾಗಿದೆ. ಇದರ ಬಗ್ಗೆ ಸಂತ ಏಕನಾತ ಮಹಾರಾಜರು ‘ಏಕನಾಥಿ ಭಾಗವತ’ ಗ್ರಂಥದಲ್ಲಿ “ಚರಾಚರ ಸೃಷ್ಟಿ ನಿಮ್ಮ ಉದರದಲ್ಲಿ ನೆಲೆಸಿದೆ” ಎಂದು ಬರೆದಿದ್ದಾರೆ. ‘ಗಣಪತಿ ತಂತ್ರ’ದ ಪ್ರಕಾರ ಶಿವನ ಡಮರು ನಾದದಿಂದ ಗಣಪತಿ ವೇದ ವಿದ್ಯೆ ಕಲಿಯುತ್ತಾರೆ. ಪ್ರತಿದಿನ ತಾಂಡವ ನೃತ್ಯ ನೋಡಿ ನೃತ್ಯಕಲೆ ಕೆಲಿಯುತ್ತಾರೆ. ಮಾತೆ ಪಾರ್ವತಿಯ ನೂಪುರದ ಝೇಂಕಾರದಿಂದ ಸಂಗೀತ ಕಲಿಯುತ್ತಾರೆ. ಇಂತಹ ವಿವಿಧ ಜ್ಞಾನವನ್ನು ಗ್ರಹಿಸಿದ್ದರಿದ್ದ ಗಣಪತಿಯ ಉದರ ದೊಡ್ಡದಾಯಿತು.

( ಸಂಗ್ರಹ )

Leave a Reply

Your email address will not be published. Required fields are marked *

Trending

Exit mobile version