ದಿನದ ಸುದ್ದಿ
ಜಗತ್ತಿನಲ್ಲಿ ಯಾವ ದೇವರ ಪವಾಡವು ನಡೆಯುವುದಿಲ್ಲ..!
ಜಗತ್ತಿನಲ್ಲಿ ಯಾವ ದೇವರ ಪವಾಡವುನಡೆಯುವುದಿಲ್ಲ, ಒಂದುವೇಳೆ ಅಂತಹ ಪವಾಡಗಳು ನಡೆದಿದ್ದರೆ ಅದರಲ್ಲಿ ಅಡಗಿರುವುದು ವೈಜ್ಞಾನಿಕ ತಂತ್ರಜ್ಞಾನ, ನಾವು ಇದನ್ನೆಲ್ಲ ನಂಭಿ ಮೂರ್ಖರಾಗುವ ಬದಲಿಗೆ ವೈಜ್ಞಾನಿಕ ಸತ್ಯವನ್ನು ಅರಿಯೋಣ, ದೇವರು ಎಂಬುದು ಕೇವಲ ಮನುವಾದಿ ಸೃಷ್ಟಿ, ಜಗತ್ತನ್ನು ಸೃಷ್ಟಿಸಿದ ದೇವರು ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶದಲ್ಲೂ ಇಲ್ಲ, ಭಾರತದ ಹಿಂದೂಗಳನ್ನು ಮುಕ್ಕೋಟಿ ದೇವತೆಗಳು ರಕ್ಷಿಸಿದರೆ ಇನ್ನಿತರೆ ಧರ್ಮಿಯರನ್ನ, ಜಗತ್ತಿನ ಇತರೆ ದೇಶವಾಸಿಗಳನ್ನ ರಕ್ಷಿಸುವವರು ಯಾರು? ಅಲ್ಲಿ ಮಳೆಸುರಿಸುವವರು ಯಾರು? ಪ್ರಳಯ ಸೃಷ್ಟಿಸುವವರು ಯಾರು?
ಸೂರ್ಯ,ಚಂದ್ರ,ಗಾಳಿ,ನೀರು,ನಕ್ಷತ್ರ,ಸೃಷ್ಟಿಲಯವನ್ನ ನಿಯಂತ್ರಿಸುವವರಾರು ಯಾರು? ಹಿಂದೂಗಳಿಗೆ ಭವಿಷ್ಯ ಹೇಳಲು, ವಾಸ್ತು ಸರಿಮಾಡಲು ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರಹೇಳುವವರು,ಜ್ಯೋತಿಷಿಗಳು,ಪೂಜಾರಿಗಳಿದ್ದಾರೆ ಇಂತವರ್ಯರು ಬೇರೆ ದೇಶಗಳಲ್ಲಿಲ್ಲ ಯಾಕೆ? ಅವರು ಕಾಯಿಲೆ ಬಂದಾಗ ಮೊದಲು ವೈದ್ಯರಬಳಿ ಹೋಗುತ್ತಾರೆ ನಾವು ದೇವರಬಳಿ ಹೋಗುತ್ತೇವೆ, ಕಾಲರ,ಪ್ಲೇಗು ಬಂದರೆ ಅವರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ನಾವು ಅವುಗಳನ್ನೇ ದೇವರೆಂದು ಪೂಜಿಸುತ್ತೇವೆ, ಅವರು ಮಳೆಗಾಗಿ ಕಾಡನ್ನು ಬೆಳೆಸಿದರೆ ನಾವು ಕಪ್ಪೆ,ಕತ್ತೆಗಳು ಮದುವೆ ಮಾಡುತ್ತೇವೆ, ಎಲ್ಲೋ ನಮ್ಮ ನಿಮ್ಮಂತೆ ಜೀವನೋಪಾಯಕ್ಕೆ ಕೆಲಸ ಮಾಡುವವನಿಗೆ ಅವಕಾಶ ಸಿಕ್ಕು ನಟನಾಗುತ್ತಾನೆ ಅವನಲ್ಲಿರುವ ಕಲೆಯನ್ನು ಗೌರವಿಸಬೇಕು, ಪ್ರೋತ್ಸಾಹಿಸಬೇಕು ಅದನ್ನು ಬಿಟ್ಟು ನಾವು ಪೂಜಿಸುತ್ತೇವೆ ನಮ್ಮ ಶ್ರಮದಹಣನೀಡಿ ನಾವೇ ಬೆಳಸಿದವನನ್ನ ನೋಡಲು ಕ್ಯೊ ನಿಲ್ಲುತ್ತೇವೆ , ದೇವರು ಅಷ್ಟೇ,ಎಲ್ಲಿಯೋ ಇದ್ದ ಕಲ್ಲನ್ನು ತಂದು ಗುಡಿಕಟ್ಟಿ ಪೂಜಿಸುತ್ತೇವೆ ನಾವೇ ಕಟ್ಟಿದ ಗುಡಿಗಳು ನಾವೇ ಸೃಷ್ಟಿಸಿದ ದೇವರುಗಳನ್ನು ಕಂಡು ಭಯಬೀಳುತ್ತೇವೆ ಯಾಕೆ?
ಸೂರ್ಯ ಚಂದ್ರ ಗ್ರಹಗಳು ಎಂದು ದೃಢಪಟ್ಟಿದ್ದರೂ ನಮ್ಮಲ್ಲಿರುವ ಮೂಢನಂಬಿಕೆ ನಮ್ಮಿಂದ ಹೋಗಲಿಲ್ಲ ಸಮಾಜಕ್ಕೆ ವೈಜ್ಞಾನಿಕ ಸತ್ಯವನ್ನು ತಿಳಿಸಬೇಕಿದ್ದ ವಿದ್ಯಾವಂತರು ಇಂಜಿನಿಯರ್ , ಡಾಕ್ಟರ್, ವಿಜ್ಞಾನಿಗಳು, ನ್ಯಾಯಾಧೀಶರು ಪರೋಕ್ಷವಾಗಿ ಪ್ರತ್ಯಕ್ಷವಾಗಿ ಈ ಸಮಾಜವನ್ನು ಮೌಢ್ಯಕ್ಕೆ ತಳ್ಳುವ ತಂತ್ರಗಾರಿಕೆ ನಡೆಸುತಿದ್ದಾರೆ ಯಾಕೆ? ಇದರಿಂದ ದೇಶಕ್ಕಾಗಲಿ, ದೇಶವಾಸಿಗಳಿಗಾಗಲಿ ಯಾವಲಾಭವಿದೆ, ಯಾತಕ್ಕಾಗಿ ಈ ಸಮಾಜವನ್ನು ಮನುವಾದಿಗಳು ದೇವರುಗಳ ಹೆಸರಿನಲ್ಲಿ ನಿಯಂತ್ರಣ ಮಾಡುತ್ತಾರೆ? ದೆವ್ವಗಳ ಹೆಸರಿನಲ್ಲಿ ಭಯಪಡಿಸುತ್ತಾರೆ? ಇದರಿಂದ ಪೂಜಾರಿಗಳಿಗೆ ಲಾಭವಿದೆ, ಜ್ಯೋತಿಷಿಗಳಿಗೆ ಲಾಭವಿದೆ, ಯಜ್ಞಯಾಗಮಾಡುವ ಜನಗಳಿಗೆ ಲಾಭವಿದೆ ಇವರೆಲ್ಲಾ ಶೇಕಡಾ 99,9% ಬ್ರಾಹ್ಮಣ ಸಮುದಾಯದಲ್ಲಿ ಸಿಗುತ್ತಾರೆ ಸಮಾಜವನ್ನು ಮೌಢ್ಯಕ್ಕೆ ತಳ್ಳಿ ದರೆ, ಅಜ್ಞಾನದಲ್ಲಿರಿಸಿದರೆ ಲಾಭವಾಗುವುದು ಯಾವಸಮುದಾಯಕ್ಕೆ ಎಂದು ಹೇಳಲು ಇದಕ್ಕಿಂತಲೂ ಹೆಚ್ಚಿನ ಮಾಹಿತಿ ಬೇಕಿಲ್ಲ.
(-ಲೇಖನ : ಹೆಚ್.ಕೆ.ಕೃಷ್ಣಅರಕೆರೆ
ಸಾಮಾಜಿಕ ಕಾರ್ಯಕರ್ತ
ಹೊನ್ನಾಳಿ)