ದಿನದ ಸುದ್ದಿ
ಬ್ರೇಕಿಂಗ್ ನ್ಯೂಸ್: ನಾಡಿನ ರೈತರಿಗೆ ಸಂತಸದ ಸುದ್ದಿ
ಸುದ್ದಿದಿನ ಡೆಸ್ಕ್: ರಾಷ್ಟ್ರೀಯ ಬ್ಯಾಂಕ್ ಗಳ ಸಾಲಮನ್ನಾ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದ ನಾಡಿನ ರೈತರಿಗೆ ಸಿಎಂ ಕುಮಾರಸ್ವಾಮಿ ಸಂತಸದ ಸುದ್ದಿ ನೀಡಿದ್ದಾರೆ.
ಸಾಲಮನ್ನಾದ ಮುಂದಿನ ತೀರ್ಮಾನ ಮುಖ್ಯಮಂತ್ರಿ ಯಾವಾಗ ತೆಗೆದುಕೊಳ್ಳುವರು ಎಂದು ಕಾದುನೋಡುತ್ತಿದ್ದವರಿಗೆ ಸದ್ಯ ಖುಷಿ ಸುದ್ದಿ ಸಿಕ್ಕಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಲಾಗಿರುವ 37 ಸಾವಿರ ಕೋಟಿ ರೂ.ಮೊತ್ತದ ಸಾಲ ಮನ್ನಾಗೆ ಗುರುವಾರ ಸಹಿ ಹಾಕುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದ ಹರದನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರು ಮಾಡಿರುವ ರೂ. 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.