ರಾಜಕೀಯ
ಹಬ್ಬಕ್ಕೆ ಕೇಂದ್ರ ಸರ್ಕಾರ ನೀಡಲಿದೆ ವಿಶೇಷ ಗಿಫ್ಟ್: ಏನದು ನೋಡಿ
ಸುದ್ದಿದಿನ ಡೆಸ್ಕ್: ರಾಖಿ ಹಬ್ಬಕ್ಕೆ ಕೇಂದ್ರ ಸರ್ಕಾರ ವಿಶೇಷ ಗಿಫ್ಟ್ ನೀಡಲಿದೆ. ರಕ್ಷಾ ಬಂಧನ ಹಬ್ಬ ಬರುತ್ತಿದ್ದು ಸರ್ಕಾರ ರಾಖಿಯನ್ನು ಜಿ.ಎಸ್.ಟಿಯಿಂದ ಹೊರಗಿಡಲು ನಿರ್ಧರಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯುಷ್ ಗೋಯಲ್ ಗಣೇಶ ತಿಳಿಸಿದ್ದಾರೆ.
ಗಣೇಶ ಚತುರ್ಥಿ ಸಮಯದಲ್ಲಿ ಬಳಸಲಾಗುವ ಅಲಂಕಾರದ ಸಾಮಗ್ರಿಗಳು, ಮೂರ್ತಿಯ ಮೇಲೆ ಹೇರಲಾಗುವ ಜಿ.ಎಸ್.ಟಿ ಕೈಬಿಡಲಾಗಿದೆ. ಇವೆಲ್ಲವೂ ನಮ್ಮ ಪರಂಪರೆಗೆ ಸಂಬಂಧಪಟ್ಟಿವೆ ಎಂದು ಹೇಳಿದ್ದಾರೆ.
ಸರ್ಕಾರದ ಈ ನಿರ್ಣಯದಿಂದಾಗಿ ಜನತೆಗೆ ಹಾಗೂ ವ್ಯಾಪಾರಿಗಳಿಗೆ ದೊಡ್ಡ ಸಿಹಿಸುದ್ದಿ ನೀಡಿದಂತಾಗಿದೆ.