ದಿನದ ಸುದ್ದಿ
ಶಾಸನಭೆಯಲ್ಲಿ ದನಿ ಇಲ್ಲದವರ ಧ್ವನಿಯಾಗಿದ್ದ ಮಾಜಿ ಶಾಸಕ ಜಿವಿ ಶ್ರೀರಾಮರೆಡ್ಡಿ ಅವರಿಗೆ ಸಂತಾಪಗಳು : ಬಿ ಕೆ ಹರಿಪ್ರಸಾದ್
ಸುದ್ದಿದಿನ, ಬೆಂಗಳೂರು : ಕಮ್ಯುನಿಸ್ಟ್ ವಿಚಾರಧಾರೆಗಳಿಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ, ರಾಜ್ಯ ವಿಧಾನಸಭೆಯಲ್ಲಿ ವಿದ್ಯಾರ್ಥಿ-ಯುವಜನರ, ರೈತ-ಕಾರ್ಮಿಕರ ಜನಪರ ಧ್ವನಿಯಾಗಿದ್ದ ಬಾಗೇಪಲ್ಲಿಯ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿಯವರು ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ ಅವರಿಗೆ ನನ್ನ ಕೆಂಪು ನಮನಗಳು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಜಿವಿಎಸ್ ಎಂದೇ ಚಿರಪರಿಚಿತರಾದ ಅವರು ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಲ್ಲಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ರಾಜ್ಯದ ಕೊಂಡಿ ಕಳಚಿದಂತಾಗಿದೆ. ಧುರಿತ ಕಾಲದಲ್ಲಿ ಬದ್ಧತೆಯ ಹೋರಾಟಗಾರನನ್ನು ಈ ನೆಲ ಕಳೆದುಕೊಂಡಿದೆ. ಸಂಗಾತಿ ರೆಡ್ಡಿಯವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.
1999 ಹಾಗೂ 2004 ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಅವರು ಅತ್ಯತ್ತಮ ಸಂಸದೀಯ ಪಟುವಾಗಿದ್ದರು. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಗಟ್ಟಿಧ್ವನಿಯಾಗಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳಲ್ಲಿ ಭಾಗವಹಿಸಿ, ನೂರಾರು ಬಾರಿ ಬಂ್ದನ, ಜೈಲುವಾಸ ಅನುಭವಿಸಿದ್ದಾರೆ. ವಿದ್ಯಾರ್ಥಿ-ಯುವಜನ,-ರೈತ-ಕೃಷಿ ಕಾರ್ಮಿಕರ ಸಂಗಾತಿಯನ್ನ ಈ ನೆಲ ಕಳೆದುಕೊಂಡು ಬಡವಾಗಿದೆ. ಶ್ರೀರಾಮರೆಡ್ಡಿಯವರಿಗೆ ನನ್ನ ಅಂತಿಮ ಸಂತಾಪ ಹಾಗೂ ಕೆಂಪು ನಮನಗಳು ಎಂದು ಹೇಳಿದ್ದಾರೆ.
ಟ್ವೀಟ್
ಕಮ್ಯುನಿಸ್ಟ್ ವಿಚಾರಧಾರೆಗಳಿಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ, ವಿಧಾನಸಭೆಯಲ್ಲಿ ನೊಂದವರ ಧ್ವನಿಯಾಗಿದ್ದ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿಯವರು ನಮ್ಮನ್ನಗಲಿದ್ದಾರೆ.
ಜಾತ್ಯಾತೀತ ತತ್ವಗಳಿಗೆ ಬದ್ಧರಾಗಿದ್ದ ಬದ್ಧತೆಯ ಹೋರಾಟಗಾರನನ್ನು ರಾಜ್ಯ ಕಳೆದುಕೊಂಡಿದೆ.ರೆಡ್ಡಿಯವರ ಕುಟುಂಬ ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ.ಕೆಂಪು ನಮನ
— Hariprasad.B.K. (@HariprasadBK2) April 15, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243