ಕ್ರೀಡೆ

ಜಿಮ್ನಾಸ್ಟಿಕ್ ನ ಸ್ಪ್ರಿಂಗ್ ಮ್ಯಾನ್..!

Published

on

ರಾಘವೇಂದ್ರ ಆರ್ ಅರಳಿಕಟ್ಟಿ
  • ಡಾ. ಗಿರೀಶ್ ಮೂಗ್ತಿಹಳ್ಳಿ

ಲೆ ಸಾಹಿತ್ಯ ಸಂಸ್ಕೃತಿ ಗೆ ಹೆಸರುವಾಸಿ ಆದ ಮೈಸೂರು, ಹಲವಾರು ಸಾಧಕ ರ ತವರೂರಾಗಿದೆ.
ತಾಯಿ ಚಾಮುಂಡೇಶ್ವರಿ ಯ ಆಶೀರ್ವಾದವಿರುವ ಈ ಊರಿನಲ್ಲಿ ಸಾಧಕರಿಗೇನು ಕೊರತೆ ಇಲ್ಲ.
ಅಂತಹ ಸಾಧಕರ ಪಟ್ಟಿಯಲ್ಲಿ ಸೇರಿರುವ ರಾಘವೇಂದ್ರ ಆರ್ ಅರಳಿಕಟ್ಟಿ ಎಂಬ ಪ್ರತಿಭಾನ್ವಿತನ ಪರಿಚಯ ಇಲ್ಲಿದೆ.

ಬಡ ಕುಟುಂಬ ದಲ್ಲಿ ಜನಿಸಿದ ಇವರು ತಾಯಿ ಸರಸ್ವತಿ ಅರಳಿಕಟ್ಟಿ ಯವರ ಆಶ್ರಯ ದಲ್ಲಿ ಬೆಳೆದರೂ ಇವರ ಆಸೆ ಗುರಿ ಬಡತನ ವನ್ನು ಮೀರಿದ್ದಾಗಿತ್ತು. ಬಾಲ್ಯದಿಂದ gymnastics ಕ್ರೀಡಾ ಪಟು ಆದ ಇವರು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪದಕ ವಿಜೇತರು.

ಕಳೆದ ಸಾಲಿನಲ್ಲಿ Sports Authority of India,
National Instute of Sports
Gymnastics Coaching Diploma ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಮೈಸೂರಿಗೆ ಮರಳಿದ್ದಾರೆ.ತಮ್ಮ ವೃತ್ತಿ ಬದುಕನ್ನು gymnastics ತರಬೇತು ದಾರನಾಗಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ಈ ವರೆಗೆ ಇವರ ಕ್ರೀಡಾಕ್ಷೇತ್ರದ ಸಾಧನೆಗೆ ಬೆಂಬಲವಿತ್ತ ಇವರ ತರಬೇತುದಾರರಾದ ಅರುಣ್ ಕುಮಾರ್ ಪಾಟೀಲ್(SAI COACH ), ಸುಧೀರ್ ದೇವದಾಸ್, ಬಾಲು, ಲೋಕೇಶ್, Ashok ಮಿಶ್ರ (SAI COACH ), Lakhan sharma(SAI COACH ), ಚಂದ್ರ ಶೇಖರ್ ನಾಯ್ಡು (SAI COACH ) ಇವರುಗಳಿಂದ ತಮ್ಮನ್ನು ಇನ್ನು ಪಕ್ವಮಾಡಿಕೊಳ್ಳುತ್ತಿದ್ದಾರೆ.

ತಮ್ಮದೇ ಉತ್ತಮ ಗುಣಮಟ್ಟದ Acadamy ಯನ್ನು ಸ್ಥಾಪಿಸುವ ಮಹದಾಸೆಯನ್ನು ಹೊಂದಿರುವ ಇವರು, Karnataka Gymnastics ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತ ಗೊಳಿಸುವ ಹಾಗೂ ಎಲ್ಲ ವಯೋಮಾನ ದ ಆಸಕ್ತಿ ಉಳ್ಳವರ ದೈಹಿಕ ಸದೃಢತೆಯ ತರಬೇತಿ ಯನ್ನು ನೀಡಿ ಉತ್ತಮ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ಗುರಿ ಹೊಂದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ವಿದ್ಯಾರ್ಥಿಯಾದ ಇವರು ತಮ್ಮದೇ ಬರೆವಣಿಗೆ ಶೈಲಿಯನ್ನು ಕಂಡುಕೊಂಡಿದ್ದಾರೆ.

ಕೃಷಿ ಕ್ರಾಂತಿ ಪರಿಹಾರ ಸಾಹಿತ್ಯ (ಪಂಥ )’ ಎಂಬ ನಿಲುವನ್ನು ಹೊಂದಿರುವ ಇವರು, ಕೃಷಿ ಎಂಬುವುದು ಹೊಲದಲ್ಲಿ ಬೆಳೆ ಬೆಳೆಯುವದರ ಜೊತೆಗೆ, ಸಮಾಜದ ಎಲ್ಲ ಕ್ಷೇತ್ರ ದಲ್ಲಿಯೂ ಕೃಷಿ ಇದೆ. ಹಾಗಾಗಿ ಉತ್ತಮ ಸಮಾಜಕ್ಕಾಗಿ ಕೃಷಿಯಲ್ಲಿ ಕ್ರಾಂತಿ ಯಾಗಬೇಕಿದೆ. ಹಾಗಾಗಿ ನನ್ನ ವಿಚಾರ ಧಾರೆ ಅದರ ಕಡೆಗಿದೆ ಎಂದು ಹೇಳುತ್ತಾರೆ

ವರ್ಣನೆ, ವಾಸ್ತವ ಎಲ್ಲ ದಿಕ್ಕಿನಿಂದಲೂ ನೋಡುವ ಜೊತೆಗೆ ಪರಿಹರಿಸುವ ಕೃಷಿ ಕ್ರಾಂತಿ ಪರಿಹಾರ ಸಾಹಿತ್ಯಕ್ಕೆ ನಾಂದಿ ಯಾಗಲಿದೆ ಎಂದು ಸಿದ್ಧಾಂತ ಮಂಡಿಸುತ್ತಾರೆ. ಕಥೆ, ಕವನ, ನಾಟಕ, ಕ್ರೀಡೆ, ಜಾನಪದ ಗೀತೆ, ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡಿರುವ ಇವರು ತಮ್ಮ ಬರೆವಣಿಗೆಯಲ್ಲಿ “ನಗು ” ವಿನ ವಿಚಾರಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ವರ್ಣನೆ, ಕನಸು, ವಾಸ್ತವಗಳ ಜೊತೆಯಲ್ಲಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ತಿಳಿವಳಿಕೆಗಾರನಾಗಬೇಕು ಎಂಬ ಜವಾಬ್ದಾರಿ ಲೇಖಕನದ್ದು ಆಗಿರುತ್ತದೆ ಎನ್ನುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version