ಬಹಿರಂಗ

ಹರಪ್ಪ : ಡಿಎನ್ಎ ನುಡಿದ‌ ಸತ್ಯ..!

Published

on

ಇತ್ತೀಚಿನ ವರುಷಗಳಲ್ಲಿ ಆವೇಗ ಪಡೆದುಕೊಂಡಿರುವ ಡಿ ಎನ್ ಎ ಸಂಶೋಧನೆಗಳು ಮನುಷ್ಯನ ಚರಿತ್ರೆ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು, ಹಾಗೆಯೇ ಸರಿಯಾದ ತಿಳುವಳಿಕೆಗೆ ಅಧಿಕೃತತೆ ತಂದುಕೊಡಬಲ್ಲವು.

ಭಾರತದ ಇತಿಹಾಸದಲ್ಲಿ ಯಾವ ಜನಾಂಗಗಳು ಎಲ್ಲಿಂದ ಬಂದವರು ಎಲ್ಲಿದ್ದವು ಮುಂತಾದ ವಿಷಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿವೆ. ಆದರೆ ಇತ್ತೀಚಿನ ವಂಶವಾಹಿ ಶೋಧನೆಗಳು ಕೆಲವು ಕರಾರುವಾಕ್ಕಾದ ತಿಳಿವನ್ನು ನೀಡಿವೆ.

ಈ ಮನುಷ್ಯನ ಜಿನೋಮ್ ಆಧರಿಸಿದ ನಮ್ಮ ಜೀವಕೋಶದೊಳಗಿನ ಪುರಾತನ ಡಿ ಎನ್ ಎ ಮೂಲಕ ನಮ್ಮ ಗತ ಇತಿಹಾಸವನ್ನು ಶೋಧಿಸಿ ಒರೆಗೆ ಹಚ್ಚುವ ಸಂಶೋಧನೆಗಳ ಕುರಿತು ಮಾಹಿತಿ ನೀಡುವ ಒಂದು ಹೊತ್ತಗೆ ಇದು. ಸ್ವತಃ ತಳಿ ವಿಜ್ಞಾನಿ ಆಗಿರುವ ಡೇವಿಡ್ ರೀಚ್ ಜಾಗತಿಕ ಮಟ್ಟದಲ್ಲಿ ಡಿಎನ್ ಎ ಮೂಲಕ ಮನುಷ್ಯನ ಇತಿಹಾಸದ ಬಗ್ಗೆ ಹೇಳುವ ವಿವರಗಳು ರೋಚಕವಾಗಿವೆ.

ಭಾರತದ ಇಂದಿನ ಎಲ್ಲಾ ಜನಸಮುದಾಯಗಳು ಹೇಗೆ ಪ್ರಮುಖವಾಗಿ ಎರಡು ಬಗೆಯ ಪೂರ್ವೀಕರ ಬೆರಕೆಯಿಂದ ಆಗಲ್ಪಟ್ಡಿವೆ, ಕಕೇಷಿಯನ್ ಮೂಲದ ಆರ್ಯ ವೈದಿಕರು ಹೇಗೆ ಯೂರೇಷಿಯಾದ ಯಾಮ್ನಾಯ ಸಂಸ್ಕೃತಿಯಿಂದ ಬಂದವರು, ಅವರಿಗೆ ಮೊದಲೇ ಇಲ್ಲಿದ್ದ ದಕ್ಷಿಣ ಭಾರತೀಯ ದ್ರಾವಿಡರೊಂದಿಗೆ ಸೇರಿಕೊಂಡರು ಹೇಗೆ, ಹೇಗೆ ತಮ್ಮ ರಾಜಕೀಯ ಸಾಮಾಜಿಕ ನಿಯಂತ್ರಣ ಸಾಧಿಸಿದರು, ಭಾರತದ ಜಾತಿ ಕಗ್ಗಂಟು ಹೇಗೆ, ಯಾವಾಗಿನಿಂದ ಬಿಗಿದುಕೊಂಡಿತು, ಜಾತಿ ಒಳಮದುವೆಗಳು ತಂದಿತ್ತಿರುವ ಜೆನೆಟಿಕ್ ಸಮಸ್ಯೆ ಏನು ಮೊದಲಾದ ವಿಷಯಗಳು ಇದರಲ್ಲಿ ಚರ್ಚಿತವಾಗಿವೆ. ಆರ್ಯರು ಭಾರತದ ಮೂಲದವರು ಎಂಬ ಪೊಳ್ಳು ವಾದಕ್ಕೆ ಈ ಡಿ ಎನ್ ಎ ಶೋಧಗಳು ಮಾರಣಾಂತಿಕ ಪೆಟ್ಟು ನೀಡಿವೆ ಎನ್ನಬಹುದು.‌ ಇಂತಹ ಹಲವು ಕುತೂಹಲಕಾರಿ ಸತ್ಯಗಳನ್ನು ಬಿಚ್ಚಿಡುವ ಪುಸ್ತಕ ‘ಹರಪ್ಪ : ಡಿಎನ್ ಎ ನುಡಿದ ಸತ್ಯ’. 

(ಪುಸ್ತಕ ಕೊಂಡು ಓದಿ ; ಪ್ರತಿಗಳಿಗಾಗಿ ‘ದಯಾನಂದ ಗೌಡ ಮೊನಂ: 9902934116’ ಗೆ ಸಂಪರ್ಕಿಸಿ.)

-ಓದು ಪ್ರಕಾಶನ

Trending

Exit mobile version