ದಿನದ ಸುದ್ದಿ
ವರದಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪೇದೆಯನ್ನು ರಕ್ಷಿಸಿದ ಅಗ್ನಿ ಶ್ಯಾಮಕ ದಳ
ಸುದ್ದಿದಿನ,ಹಾವೇರಿ: ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿ ಕರ್ತವ್ಯ ಮುಗಿಸಿ ಕಡಕೋಳಕ್ಕೆ ಹಿಂದಿರುಗುತ್ತಿದ್ದ ಪೊಲೀಸ್ ಪೇದೆ ಯಲ್ಲಪ್ಪ ಕೊರವಿ ವರದಾ ನದಿಯಲ್ಲಿ ಕೊಚ್ಚಿಹೋಗುತ್ತಿದ್ದವನನ್ನು ಅಗ್ನಿಶ್ಯಾಮಕದಳ ರಕ್ಷಿಸಿ ಸುರಕ್ಷಿತವಾಗಿ ಮನೆ ಸೇರಿಸಿದೆ.
ಮಂಗಳವಾರ ತಡರಾತ್ರಿ ಕಾಗಿನೆಲೆ ಠಾಣೆಯಿಂದ ಮನೆಗೆ ಬರುತ್ತಿರುವಾಗ ಕರ್ಜಗಿ- ಕಲಕೋಟಿ ವರದಾ ಸೇತುವೆ ಮೇಲೆ ಬೈಕ್ನಲ್ಲಿ ತೆರಳುವಾಗ ನೀರಿನ ಸೆಳೆವಿಗೆ ಸಿಕ್ಕು ನದಿಯಲ್ಲಿ ಕೊಚ್ಚಿಹೋಗಿ ಸೇತುವೆಯಿಂದ 500 ಮೀಟರ್ ಅಂತರದಲ್ಲಿ ಗಿಡವೊಂದರ ಆಶ್ರಯಪಡೆದು ನೆರವಿಗಾಗಿ ಕೂಗಾಡುತ್ತಿದ್ದ ಎನ್ನಲಾಗಿದೆ.
ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅಪರ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಅಗ್ನಿಶ್ಯಾಮಕ ಅಧಿಕಾರಿ ಸೋಮಶೇಖರ ಅಗಡಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಆಗಮಿಸಿ ತಂಡದೊಂದಿಗೆ ಪೇದೆಯನ್ನು ರಕ್ಷಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
#Karnataka #Rain #Belagavi #NorthKarnataka #Monsoon #Maharashtra #Flood