ರಾಜಕೀಯ
ಯಡಿಯೂರಪ್ಪಗೆ ಸವಾಲು ಹಾಕಿದ ರೇವಣ್ಣ
ಸುದ್ದಿದಿನ ಡೆಸ್ಕ್ | ಸಚಿವ ಹೆಚ್,ಡಿ,ರೇವಣ್ಣ ಎಲ್ಲಾ ಇಲಾಖೆಗಳ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದ್ದಾರೆಂಬ ಬಿಎಸ್ ವೈ ಆರೋಪ ಹಿನ್ನೆಲೆ, ನಾನು ಯಾವುದೇ ಇಲಾಖೆಗಳ ವರ್ಗಾವಣೆಯಲ್ಲಿ ಮೂಗು ತೂರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ನನ್ನ ಇಲಾಖೆ ಮತ್ತು ಹಾಸನ ಜಿಲ್ಲೆಯಲ್ಲಿ ಮಾತ್ರ ವರ್ಗಾವಣೆ ಮಾಡಿದ್ದೇನೆ, ನಿಜ ಸಂಗತಿ ತಿಳಿಯ ಬೇಕಾದರೆ ಯಡಿಯೂರಪ್ಪರವರು ಕಡತಗಳನ್ನ ತೆಗೆದು ನೋಡಲಿ ಎಂದು ಸವಾಲ್ ಹಾಕಿದ್ದಾರೆ ಸಚಿವ ಎಚ್.ಡಿ.ರೇವಣ್ಣ.
ಯಡಿಯೂರಪ್ಪರ ಆರೋಪ ನಿರಾಧಾರವಾಗಿದ್ದು, ಯಡಿಯೂರಪ್ಪರ ಪ್ರಶ್ನೆಗೆ ಉತ್ತರ ನೀಡಿದ್ರೆ ನಾವು ಪೊಳ್ಳು ಎದ್ದೇಳ್ತೇವೆ, ಅಖಂಡ ಕರ್ನಾಟಕ ಹಾಗೂ ಯಡಿಯೂರಪ್ಪ ಸಿಎಂ ಜೊತೆ ಕುಳಿತು ಮಾತನಾಡಲಿ. ಯಡಿಯೂರಪ್ಪ ಮಾಧ್ಯಮಗಳಲ್ಲಿ ಮಾತನಾಡುವುದನ್ನು ಬಿಟ್ಟು ಸಿಎಂ ಜೊತೆ ಮಾತುಕತೆ ನಡೆಸಲಿ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಯಡಿಯೂರಪ್ಪ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಮೊದಲು ರಾಷ್ಟ್ರೀಕೃತ ಬ್ಯಾಂಕ್ ಗಳ ರೈತ್ರ ಸಾಲ ಮನ್ನಾ ಮಾಡಿಸಲಿ ಎಂದು ಕಿಡಿಕಾರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9886715401